10th Kannada Notes 2025 | 10ನೇ ತರಗತಿ ಕನ್ನಡ ನೋಟ್ಸ್ | SSLC Kannada Notes

 

10th Kannada Notes 2025 | 10ನೇ ತರಗತಿ ಕನ್ನಡ ನೋಟ್ಸ್ | SSLC Kannada Notes

ಗದ್ಯ ಪಾಠ-1 : ನಮ್ಮ ಭಾಷೆ

 

ಲೇಖಕರ ಪರಿಚಯ : ಎಂ. ಮರಿಯಪ್ಪಭಟ್ಟ

 

* ಎಂ. ಮರಿಯಪ್ಪಭಟ್ಟರು ಸಾ.ಶ. 1906 ರಲ್ಲಿ ಕಬಕ ಗ್ರಾಮದಲ್ಲಿ ಜನಿಸಿದರು.

 

ಇವರು ಕನ್ನಡ ಸಂಸ್ಕೃತಿ, ಛಂದಸ್ಸಾರ, ಜಾತಕತಿಲಕಂ ಮತ್ತು ತುಳು-ಇಂಗ್ಲಿಷ್ ನಿಘಂಟು ರಚಿಸಿದ್ದಾರೆ.

 

ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

 

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

 

೧. ಭಾಷೆ ಯಾವುದಕ್ಕೆ ಸಾಧನವಾಗಿದೆ?

ಉ : ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಸಾಧನವಾಗಿದೆ.

 

೨. ಪ್ರಾಣಿಗಳು ತಮ್ಮ ಮಕ್ಕಳಿಗೆ ಯಾವ ವಿಚಾರವಾಗಿ ತರಪೇತು ಕೊಡುತ್ತವೆ ?

ಉ : ಪ್ರಾಣಿಗಳು ಚಲನವಲನ ಮತ್ತು ಆಹಾರಗಳ ವಿಚಾರವಾಗಿ ತಮ್ಮ ಮಕ್ಕಳಿಗೆ ತರಹೇತು ಕೊಡುತ್ತವೆ.

 

೩. ಮನುಷ್ಯನಿಗೆ ಲೆಕ್ಕವಿಡುವ ಅವಶ್ಯಕತೆ ಯಾವಾಗ ಉಂಟಾಯಿತು ?

ಉ : ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟಾಗ ಮನುಷ್ಯನಿಗೆ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು.

 

೪. ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು ಯಾರು ?

ಉ : ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು ನಯಸೇನ.

 

೫. ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಯಾವಾಗ ಬಂದವು ?

ಉ : ಮಹಮ್ಮದೀಯರ ಆಳ್ವಿಕೆಯ ಕಾಲದಲ್ಲಿ ಪರ್ಷಿಯನ್ ಶಬ್ದಗಳು ಕನ್ನಡಕ್ಕೆ ಬಂದವು.

 

ಆ] ಕೆಳಗಿನ ಪ್ರಶ್ನೆಗಳಿಗೆ ೨-೩ ವಾಕ್ಯಗಳಲ್ಲಿ ಉತ್ತರಿಸಿ

 

೧. ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆಯ ಲಕ್ಷಣಗಳೇನು?

ಉ: ವ್ಯಾವಹಾರಿಕವೆಂದರೆ ಜೀವದ್ಭಾಷೆ. ಅದರಲ್ಲಿ ಜನರು ಮಾತನಾಡುತ್ತಾರೆ. ವ್ಯವಹರಿಸುತ್ತಾರೆ. ಉದಾ : ಕನ್ನಡ, ತಮಿಳು, ತೆಲುಗು ಇತ್ಯಾದಿ.

* ಗ್ರಾಂಥಿಕವೆಂದರೆ ಅಭಿವೃದ್ಧಿ ಹೊಂದಿ ಗ್ರಂಥ ರಚನೆಯಲ್ಲಿ ಉಪಯೋಗವಾದ ಭಾಷೆ. ಉದಾ : ಸಂಸ್ಕೃತ, ಕನ್ನಡ, ಇಂಗ್ಲಿಷ್ ಇತ್ಯಾದಿ.

 

೨. ಲಿಪಿಯ ಜಾಡು ಆರಂಭಗೊಂಡ ಬಗೆ ಹೇಗೆ ?

ಉ: ಮಾನವ ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟಾಗ ಆತನಿಗೆ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು.

* ಮನುಷ್ಯ ತಾನು ದಿನಗೆಲಸಕ್ಕೆ ಹೋದ ಲೆಕ್ಕವನ್ನು ಗೋಡೆಯ ಮೇಲೆ ಪ್ರತಿದಿನ ಒಂದೊಂದು ಗೆರೆ ಎಳೆದು ಗುರುತಿಸಿ ಲೆಕ್ಕವಿಟ್ಟನು.

* ಹೀಗೆ ಲಿಪಿಯ ಜಾಡು ಆರಂಭಗೊಂಡಿತು.

 

೩. ಲಿಪಿಯ ಮೂಲಕ ಜ್ಞಾನ ಭಂಡಾರ ಯಾವ ರೀತಿ ಭದ್ರವಾಯಿತು ?

: * ಮಾನವನಿಗೆ ಸಮಯ ಸಿಕ್ಕಾಗ ತನ್ನ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನು ತನ್ನ ಬುದ್ಧಿವಂತೆಕೆಯಿಂದ ಕಂಡುಹಿಡಿದೆ.

* ಸಂದರವಾದ ಸಾಹಿತ್ಯವನ್ನು ರಚಿಸಿದ. ಹೀಗೆ ಸಾಹಿತ್ಯ ವಿವಿಧ ರೂಪದಲ್ಲಿ ಬೆಳೆಯಿತು.

* ಇದರಿಂದ ಪರಂಪರೆಯಿಂದ ಬಂದ ಎಷ್ಟೋ ವಿಷಯಗಳನ್ನು ಬರೆದಿಡಲು ಸಾಧ್ಯವಾಯಿತು.

* ಆ ಮೂಲಕ ಜ್ಞಾನ ಭಂಡಾರ ಭದ್ರವಾಯಿತು.

 

೪. ಕನ್ನಡ ಭಾಷೆ ಹದಗೊಂಡದ್ದು ಹೇಗೆ ?

 

ಉ: * ಅನೇಕ ಕವಿಗಳು ಕನ್ನಡ ಭಾಷೆ ಅಭಿವೃದ್ದಿ ಹೊಂದಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು ತಿಳಿಸಿದರು.

* ಬಸವೇಶ್ವರ, ಅಲ್ಲಮಪ್ರಭು, ಚಾಮರಸ, ಕುಮಾರವ್ಯಾಸ ಪುರಂದರದಾಸ, ಕನಕದಾಸರು

* ತಮ್ಮ ತಮ್ಮ ಅನುಭವವನ್ನು ಸುಲಭ, ಸುಂದರ, ಸಹಜವಾದ ಮಾತುಗಳಿಂದ ತಿಳಿಸಿದರು.

ಹೀಗೆ ಕನ್ನಡ ಭಾಷೆ ಹದಗೊಂಡಿತು.

 

೫. ಆಂಗ್ಲ ಭಾಷೆ ವಿಶ್ವವ್ಯಾಪಿಯಾಗಲು ಕಾರಣವೇನು ?

 

ಉ: ದೇಶ ವಿದೇಶಗಳ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಆಂಗ್ಲ ಪಂಡಿತರು ಮುಕ್ತ ಮನಸ್ಸಿನಿಂದ ಅಭ್ಯಾಸ ಮಾಡಿದರು.

* ಆಂಗ್ಲ ವಿಜ್ಞಾನಿಗಳು, ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು, ಮಹಾ ಮೇಧಾವಿಗಳು ಹೀಗೆ ಎಲ್ಲರೂ ತಮ್ಮ ಆಸೆ, ಆಕಾಂಕ್ಷೆಗಳನ್ನು

* ತಮ್ಮ ಭಾಷೆಯ ಮೂಲಕ ತಿಳಿಸಿದರು. ಇದರ ಪರಿಣಾಮವಾಗಿ ಆಂಗ್ಲ ಭಾಷೆ ಬೆಳೆದು ವಿಶ್ವವ್ಯಾಪಿಯಾಯಿತು.

 

ಇ) ಸಂದರ್ಭ ಸಹಿತ ಸ್ವಾರಸ್ಯ ವಿವರಿಸಿ.

 

೧. “ಸಂಸ್ಕೃತಿಯ ಇತಿಹಾಸ ಉಳಿಯಿತು”

೨. “ತಕ್ಕುದೆ ಬೆರಸ ಧೃತಮುಮಂ ತೈಲಮುಮಂ’

೩. “ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ”

೪. “ಒಬ್ಬ ತಾಯಿಯ ಗಾನದ ಶ್ರುತಿಯಂತೆ ”

 

 

ಆಯ್ಕೆ :

ಈ ವಾಕ್ಯವನ್ನು ಎಂ. ಮರಿಯಪ್ಪ ಭಟ್ಟರ ‘ಕನ್ನಡ ಸಂಸ್ಕೃತಿ’ ಕೃತಿಯಿಂದ ಆಯ್ದ ‘ನಮ್ಮ ಭಾಷೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ :

ಲಿಪಿಯ ಆರಂಭ, ಲಿಪಿಯಮಹತ್ವ, ಭಾಷೆ ಮತ್ತು ಸಾಹಿತ್ಯದ ಉಗಮ, ಬೆಳವಣಿಗೆ, ಕನ್ನಡ ಭಾಷೆ ಮತ್ತು ಸಾಹಿತ್ಯ ಹದಗೊಂಡ ಬಗೆ ಪ್ರತಿಭಾಷೆಗೂ ಸಿಗಬೇಕಾದ ಗೌರವವನ್ನು ತಿಳಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.

ಸ್ವಾರಸ್ಯ :

ಭಾಷೆಯ ಸೊಗಸು ಮತ್ತು ಅದರ ಮಹತ್ವವು ಸ್ವಾರಸ್ಯಪೂರ್ಣವಾಗಿ ವ್ಯಕ್ತಗೊಂಡಿದೆ.

 

ಈ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ

೧. ಭಾಷೆ ಸತ್ವಪೂರ್ಣವಾಗಿ ವಿಕಾಸಗೊಳ್ಳುವುದು ಯಾವಾಗ ?

ಉ:

ಒಂದು ಭಾಷೆ ಸತ್ವಪೂರ್ಣವಾಗಬೇಕಾದರೆ ಅದನ್ನಾಡುವ ಜನ ಅಭಿಮಾನಧನರೂ, ಬುದ್ಧಿಶಾಲಿಗಳೂ, ಪ್ರಯೋಗಶೀಲರೂ ಆಗಿರಬೇಕು.

* ನೆರೆಹೊರೆಯ ಭಾಷೆಯೊಂದಿಗೆ ಕೊಡು ಕೊಳ್ಳುವಿಕೆಯ ವ್ಯವಹಾರ ಹೊಂದಿರಬೇಕು.

* ದೇಶ ವಿದೇಶಗಳ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಮುಕ್ತ ಮನಸ್ಸಿನಿಂದ ಅಭ್ಯಾಸ ಮಾಡಬೇಕು.

* ಆಂಗ್ಲ ವಿಜ್ಞಾನಿಗಳು, ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು, ಮಹಾ ಮೇಧಾವಿಗಳು ಹೀಗೆ ಎಲ್ಲರೂ ತಮ್ಮ ಆಸೆ, ಆಕಾಂಕ್ಷೆಗಳನ್ನು ತಮ್ಮ ಭಾಷೆಯ ಮೂಲಕವೇ ತಿಳಿಸಬೇಕು.

* ಆ ಭಾಷೆಯ ಸಾಮಾಗ್ರಿಗಳಾದ ಗಾದೆ, ನುಡಿಗಟ್ಟು, ನಾಣ್ಣುಡಿ ಹಾಗೂ ಪದಗಳ ಬಳಕೆ ಹೆಚ್ಚಾಗಬೇಕು.

* ಹೀಗೆ ಆದಾಗ ಮಾತ್ರ ಭಾಷೆ ಸತ್ವಪೂರ್ಣವಾಗಿ ವಿಕಾಸವಾಗುತ್ತದೆ.

 

೨. ಕನ್ನಡಭಾಷೆ ಸಮೃದ್ಧವಾಗಿ ರೂಪುಗೊಂಡ ಬಗೆ ಹೇಗೆ ? ವಿವರಿಸಿ,

 

ಉ: * ಕನ್ನಡ ಭಾಷೆಗೆ ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಪೋಷಣೆ ದೊರೆಯುತ್ತಾ ಬಂದಿದೆ.

* ಕನ್ನಡದ ಪಂಡಿತರು ವೈದಿಕ ಹಾಗೂ ಜೈನ ಧಾರ್ಮಿಕ ತತ್ವಗಳನ್ನು ಕನ್ನಡದಲ್ಲಿ ವಿವರಿಸುವ ಉದ್ದೇಶದಿಂದ ಕಾವ್ಯವನ್ನು ರಚಿಸಿದರು.

* ಅನೇಕ ಕವಿಗಳು ಕನ್ನಡ ಅಭಿವೃದ್ಧಿ ಹೊಂದಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು ತಿಳಿಸಿದರು.

ಬಸವೇಶ್ವರ, ಅಲ್ಲಮಪ್ರಭು, ಚಾಮರಸ, ಕುಮಾರವ್ಯಾಸ ಪುರಂದರದಾಸ, ಕನಕದಾಸರು ತಮ್ಮ ತಮ್ಮ ಅನುಭವವನ್ನು ಸುಲಭ, ಸುಂದರ, ಸಹಜವಾದ ಮಾತುಗಳಿಂದ ತಿಳಿಸಿದರು.

* ಸಂಸ್ಕೃತ, ಪ್ರಾಕೃತ ಭಾಷೆಗಳಿಂದ ಅನೇಕ ಶಬ್ದಗಳನ್ನು ಕನ್ನಡಕ್ಕೆ ಬಂದವು.

* ಪರ್ಷಿಯನ್, ಇಂಗ್ಲಿಷ್ ಭಾಷೆಯಿಂದ ಅನೇಕ ಶಬ್ದಗಳು ಕನ್ನಡಕ್ಕೆ ಬಂದವು ಹೀಗೆ ಕನ್ನಡ ಭಾಷೆ ಸಮೃದ್ಧವಾಗಿ ರೂಪುಗೊಂಡಿತು.

 

ಗದ್ಯ ಪಾಠ-2 : ವ್ಯಾಘ್ರಗೀತೆ

 

ಲೇಖಕರ ಪರಿಚಯ.. ವಿ. ಎನ್ ಮೂರ್ತಿರಾವ್

ವಿ ಎನ್ ಮೂರ್ತಿರಾವ್ ಸಾ. ಶ. 1900 ರಲ್ಲಿ ಮಂಡ್ಯಜಿಲ್ಲೆಯ ಅಕ್ಕಿಹೆಬ್ಬಾಳಿನಲ್ಲಿ ಜನಿಸಿದರು.

* ಇವರು ಹಗಲುಗನಸುಗಳು, ಚಿತ್ರಗಳು-ಪತ್ರಗಳು, ಚಂಡಮಾರುತ, ದೇವರು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

* ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಲಭಿಸಿದೆ.

 

ಅ). ಒಂದು ವಾಕ್ಯದಲ್ಲಿ ಉತ್ತರಿಸಿರಿ.

 

1. ಭಗವದ್ಗೀತೆಯನ್ನು ರಚಿಸಿದವರು ಯಾರು?

ಉ : ಭಗವದ್ಗೀತೆಯನ್ನು ರಚಿಸಿದವರು ಮಹರ್ಷಿ ವೇದವ್ಯಾಸರು.

 

2. ಹುಲಿಗೆ ಪರಮಾನಂದವಾಗಲು ಕಾರಣವೇನು?

ಉ : ಶಾನುಭೋಗರ ದುಂಡದುಂಡಾದ ಶರೀರವನ್ನು ನೋಡಿ ಹುಲಿಗೆ ಪರಮಾನಂದವಾಯಿತು.

 

3. ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?

ಉ : ಮುಖದರ್ಶನವಾಗದಂತೆ ಹುಲಿಯಿಂದ ತಪ್ಪಿಸಿಕೊಳ್ಳುವ ದೊಂಬರಾಟದಲ್ಲಿ ಶಾನುಭೋಗರಿಗೆ ತಲೆ ಸುತ್ತಲಾರಂಭಿಸಿತು.

 

4. ಶಾನುಭೋಗರ ಬ್ರಹ್ಮಾಸ್ತ್ರ ಯಾವುದು?

ಉ : ಶಾನುಭೋಗರ ಬ್ರಹ್ಮಾಸ್ತ್ರ ಖಿರ್ದಿ ಪುಸ್ತಕ.

 

5. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?

ಉ : ಹಸಿದು ಮಲಗಿದ್ದ ಹುಲಿಯು ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿತು.

 

ಅ) ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.

 

1. ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು?

ಉ: * ಶಾನುಭೋಗರು ತಮ್ಮ ಹಳ್ಳಿಯನ್ನು ತಲುಪಬೇಕಾದರೆ ಮದಲಿಂಗನ ಕಣಿವೆಯನ್ನು ದಾಟಿ ಹೋಗಬೇಕಿತ್ತು.* ಕಾಡುದಾರಿ, ಆದರೂ ಬೆಳದಿಂಗಳ ದಿನ ಸ್ವಲ್ಪ ದೊಡ್ಡ ಹೆಜ್ಜೆಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು ಎಂದು ಯೋಚಿಸಿದರು.

 

2. ಹುಲಿಯು ಹಿಂದಿನಿಂದ ಹಾరి ಕೊಲ್ಲದಿರಲು ಕಾರಣವೇನು?

 

ಉ: ಭರತ ಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ.

* ಏಕೆಂದರೆ ಶತ್ರುಗಳಾದರೂ ಸರಿಯೆ, ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ,

* ಆದ್ದರಿಂದ ಹುಲಿಯು ಶಾನುಭೋಗರನ್ನು ಬೆನ್ನ ಹಿಂದಿನಿಂದ ಹಾರಿ ಕೊಲ್ಲಲಿಲ್ಲ.

 

3. ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದ ಘಟನೆಗಳನ್ನು ವಿವರಿಸಿ.

 

ಉ: ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ರೈತರ ಗಾಡಿಯ ಎತ್ತುಗಳು ಮುಂದೆ ಹೋಗದೆ ನಿಂತವು.

* ಹುಲಿಯ ಗರ್ಜನೆ ಕೇಳಿಸಿತು. ಎತ್ತುಗಳ ಗಂಟೆಯ ಸದ್ದನ್ನು ಕೇಳಿದ ಹುಲಿಯು ಕೆಲವು ನಿಮಿಷ ತಡೆಯಿತು.

* ರೈತರ ಮಾತು ಕೇಳಿ ಬಂದ ಮೇಲೆ ನಿರಾಶೆಯಿಂದ ಪಲಾಯನ ಮಾಡಿತು.ಆನಂತರ ರೈತರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ತೋಟಾ ಹಾರಿಸಿ,* ಕೈಲಾದಷ್ಟು ಗಲಭೆ ಮಾಡುತ್ತಾ ತೆಂಗಿನ ಗರಿಯ ಪಂಜು ಹೊತ್ತಿಸಿಕೊಂಡು ಜಾಗರೂಕತೆಯಿಂದ ಮುಂದೆ ಬಂದರು.

* ಮೂರ್ಛೆಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು, ಮುಖದ ಮೇಲೆ ನೀರೆರಚಿ ಎಚ್ಚರಿಸಿದರು.

 

ಇ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

 

1. “ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ.”

 

2. “ದೇವರೆ, ಮರ ಹತ್ತುವಷ್ಟು ಅವಕಾಶ ಕರುಣಿಸು.”

 

3. “ನಾನು ಮುಖ ಮೇಲಾಗಿ ಬಿದ್ದಿದ್ದೆನೆ?”

 

4. “ಹುಲಿ ಈಗ ಎಷ್ಟು ಹಸಿದಿರಬೇಕು.”

 

ಆಯ್ಕೆ: ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ ‘ಸಮಗ್ರ ಲಲಿತ ಪ್ರಬಂಧಗಳು’ ಸಂಕಲನದಿಂದ ಆಯ್ಕೆ ‘ವ್ಯಾಘ್ರಗೀತ’ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.

 

ಸಂದರ್ಭ: ಹಿಂಸ್ರಪಶುಗಳು ಸಹ ಬದುಕುವುದಕ್ಕೆ ಒಂದು ಆದರ್ಶವನ್ನು ಪಾಲಿಸುವಾಗ ಪುಣ್ಯಭೂಮಿ ಭಾರತದಲ್ಲಿರುವ ಮನುಷ್ಯರು ಹಿರಿಯರ ಆದರ್ಶವನ್ನು ಪಾಲಿಸಿದರಾಗದೆ ಎಂಬುದನ್ನು ವಿಡಂಬಿಸುವ ಸಂದರ್ಭವೇ ಆಗಿದೆ.

 

ಸ್ವಾರಸ್ಯ: ಹುಲಿಯ ಧರ್ಮಶ್ರದ್ಧೆ ಹಾಗೂ ಶಾನುಭೋಗರು ಸಾವಿನ ಸಂಕಟದಿಂದ ಪಾರಾಗುವ ರೀತಿ ಸ್ವಾರಸ್ಯಪೂರ್ಣವಾಗಿ ವ್ಯಕ್ತಗೊಂಡಿದೆ.

 

ಈ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

 

1. ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆಯಾಡುವ ಬಗೆಯನ್ನು ವಿವರಿಸಿ.

 

ಉ: *. ಸಸ್ಯಾಹಾರವನ್ನು ತಿನ್ನಬಲ್ಲ ಮಾನವನೇ ಮಾಂಸವನ್ನು ತಿನ್ನಬಹುದಾದರೆ ಆಹಾರಕ್ಕಾಗಿ ಹುಲಿ ಪ್ರಾಣಿಗಳನ್ನು ಕೊಂದು ತಿನ್ನುವುದರಲ್ಲಿ ತಪ್ಪಿಲ್ಲ.

*. ಆದರೆ ಧರ್ಮವನ್ನು ಅನುಸರಿಸಿ ಕೊಲ್ಲುತ್ತವೆಯೋ ಅಥವಾ ಇಷ್ಟಬಂದಂತೆ ಕೊಲ್ಲುತ್ತದೆಯೋ ಎಂಬುದೇ ಮುಖ್ಯ ಪ್ರಶ್ನೆ.

.. ಬೇರೆ ಬೇರೆ ದೇಶಗಳಲ್ಲಿರುವ ಹುಲಿಗಳ ವಿಷಯ ಹೇಗೋ ಗೊತ್ತಿಲ್ಲ. ಆದರೆ ಭಾರತದ ಹುಲಿಗಳು ಹಾಗಲ್ಲ.

*. ಶ್ರೀರಾಮನಂತ ದೊರೆಗಳು ಆಳಿದ. ಭಗವದ್ಗೀತೆಯಂಥ ಗ್ರಂಥ ಹುಟ್ಟಿದ ಭರತ ಭೂಮಿಯಲ್ಲಿ ಹುಲಿಗಳು ಆ ರೀತಿ ಮಾಡುವುದಿಲ್ಲ.

*. ಭರತಖಂಡದ ಹುಲಿಗಳು ಶತ್ರುಗಳನ್ನಾದರೂ ಸರಿಯೇ ಹಿಂದಿನಿಂದ ಕೊಲ್ಲುವುದಿಲ್ಲ.

* ತನ್ನ ಬಡಬಂಧುವಾದ ಬೆಕ್ಕಿನಂತೆ ದೇಹವನ್ನು ಹುದುಗಿಸಿಕೊಂಡು ಮೆಲ್ಲಮೆಲ್ಲನೆ ಶಾನುಭೋಗರ ಹತ್ತಿರ ಸರಿದು ಅವರ ಮುಂಭಾಗಕ್ಕೆ ಬರಲು ಪ್ರಯತ್ನಿಸುತ್ತದೆ. ಹೀಗೆ ಧರ್ಮಮಾರ್ಗದಲ್ಲಿ ತಾನುಭೋಗರನ್ನು ತಿನ್ನಲು ಪ್ರತಿಸಲವೂ ಪ್ರಯತ್ನಿಸುತ್ತದೆ.

*. ಭಗವದ್ಗೀತೆಯ ‘ಸ್ವಧರ್ಮೇ ನಿಧನಂ ಶ್ರೇಯಃ’ ಎಂಬ ಮಾತಿನಂತೆ ಹುಲಿಗಳು ಧರ್ಮದಿಂದ ಬೇಟೆಯಾಡುತ್ತವೆ.

*. ಎಂದು ಮೂರ್ತಿರಾಯರು ಅಭಿಪ್ರಾಯ ಪಡುತ್ತಾರೆ.

 

2. ಶಾನುಭೋಗರನ್ನು ರಕ್ಷಿಸಿದ್ದು ಖರ್ದಿ ಪುಸ್ತಕವೇ? ಹುಲಿಯ ಧರ್ಮವೇ? ಸಮರ್ಥನೆಯೊಂದಿಗೆ ವಿವರಿಸಿ.

 

ಉ:* ಶಾನುಭೋಗರು ಉಳಿದಿದ್ದು ಖರ್ದಿ ಪುಸ್ತಕದಿಂದಲ್ಲ, ಹುಲಿಯ ಧರ್ಮಶ್ರದ್ಧೆಯಿಂದ ಎಂದು ಹೇಳಬಹುದು.

*. ಅವರ ದುಂಡು ದುಂಡಾದ ಶರೀರವನ್ನು ನೋಡಿದ ಹುಲಿ ಅವರನ್ನು ಎಳೆದುಕೊಂಡು ಹೋಗಿ ತಿನ್ನಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ.

* ಶಾನುಭೋಗರು ಎಚ್ಚರ ತಪ್ಪಿ ಕೆಳಗೆ ಬಿದ್ದಾಗ ಅವರನ್ನು ಎಳೆದುಕೊಂಡು ಹೋಗಿ ತಿನ್ನಬಹುದಿತ್ತು, ಆದರೆ ಅದು ಹಾಗೆ ಮಾಡಲಿಲ್ಲ.

* ಭರತ ಖಂಡದ ಹುಲಿಗಳು ಶತ್ರುಗಳಾದರೂ ಸರಿ ಬೆನ್ನ ಹಿಂದಿನಿಂದ ಹಾರಿ ಕೊಲ್ಲುವುದು ಧರ್ಮವಲ್ಲವೆಂದು ತಿಳಿದಿದ್ದವು.

*. ಶಾನುಭೋಗರು ಬೆನ್ನು ಮೇಲೆ ಮಾಡಿ ಬಿದ್ದಿದ್ದರಿಂದ ಹುಲಿಯು ಅವರನ್ನು ತಿನ್ನದೆ ಬಿಟ್ಟಿತ್ತು.

*. ಅದು ಕೊನೆವರೆಗೂ ತನ್ನ ಧರ್ಮಶ್ರದ್ಧೆಯನ್ನು ಅನುಸರಿಸಿತು.

* ಆದ್ದರಿಂದ ಶಾನುಭೋಗರನ್ನು ರಕ್ಷಿಸಿದ್ದು ಹುಲಿಯ ಧರ್ಮವೇ ಎಂದು ಸಮರ್ಥವಾಗಿ ಹೇಳಬಹುದು.

 

ಗದ್ಯ ಪಾಠ-3 : ‘ಭಾಗ್ಯಶಿಲ್ಪಿಗಳು

ಲೇಖಕರ ಪರಿಚಯ: ಡಿ.ಎಸ್.ಜಯಪ್ಪಗೌಡ

*. ಡಿ.ಎಸ್ ಜಯಪ್ಪ ಗೌಡ ಅವರು, ಸಾ ಶ 1947ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿಯಲ್ಲಿ ಜನಿಸಿದರು.

*. ಇವರು ‘ಮೈಸೂರು ಒಡೆಯರು’, ‘ಜನಪದ ಆಟಗಳು’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

*. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಅ] ಒಂದು ವಾಕ್ಯದಲ್ಲಿ ಉತ್ತರಿ

1. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?

ಉ: ನಾಲ್ವಡಿ ಕೃಷ್ಣರಾಜ ಒಡೆಯರು 1895 ರಲ್ಲಿ ಪಟ್ಟಾಭಿಷಿಕ್ತರಾದರು.

2. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?

ಉ: ಮೈಸೂರು ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದರು

3. ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು?

ಉ: ಅವರನ್ನು ದಿವಾನರಾಗಿ ನೇಮಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರು.

4. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು?

ಉ: ವಿಶ್ವೇಶ್ವರಯ್ಯ ಅವರಿಗೆ ‘ಸರ್’ ಪದವಿಯನ್ನು ನೀಡಿ ಗೌರವಿಸಿತು.

5. ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?

ಉ: ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ‘ಎಂಜಿನಿಯರ್ ದಿನಾಚರಣೆ ಮಾಡಲಾಗುತ್ತಿದೆ.

6. ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ ಯಾವುದು?

ಉ:ಶಿವನಸಮುದ್ರದ ಬಳಿ ಕಾವೇರಿನದಿಯ ಜಲವಿದ್ಯುತ್ ಯೋಜನೆ ಏಷ್ಯಾದಲ್ಲಿಯೇ ಮೊದಲ ಜಲ ವಿದ್ಯುತ್ ಯೋಜನೆಯಾಗಿದೆ.

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ

1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು?

ಉ : ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ

1. ಗ್ರಾಮ ನೈರ್ಮಲೀಕರಣ

2. ವೈದ್ಯಕೀಯ ಸಹಾಯ 3.ವಿದ್ಯಾಪ್ರಚಾರ

4. ನೀರಿನ ಸೌಕರ್ಯ 5. ಪ್ರಯಾಣ ಸೌಲಭ್ಯ ಮುಂತಾದವು

ಸ್ವಯಂ ಆಡಳಿತ ಕ್ಷೇತ್ರಗಳಾದವು.

2. ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?

ಉ : * 1900 ರಲ್ಲಿ ಕಾವೇರಿನದಿ ನೀರಿನಿಂದ ಪ್ರಾರಂಭಿಸಿದ ಶಿವನಸಮುದ್ರ ಜಲವಿದ್ಯುತ್ ಯೋಜನೆ.

* 1907 ರಲ್ಲಿ ವಾಣಿವಿಲಾಸ ಸಾಗರ ಅಣೆಕಟ್ಟು ನಿರ್ಮಾಣ ಮತ್ತು

* 1911 ರಲ್ಲಿ ಕೃಷ್ಣರಾಜ ಸಾಗರ ಆಣೆಕಟ್ಟು ನಿರ್ಮಾಣ ಮುಂತಾದ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು.

3. ವಿಶ್ವೇಶ್ವರಯ್ಯನವರು ಶಿಕ್ಷಣದ ಬಗ್ಗೆ ಏನೆಂದು ಹೇಳಿದ್ದಾರೆ?

ಉ : *ವಿಶ್ವೇಶ್ವರಯ್ಯನವರು ಶಿಕ್ಷಣದ ಬಗ್ಗೆ “ಆಧುನಿಕ ಶಿಕ್ಷಣವು ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರ, ಶಿಕ್ಷಣವು ಸಂಜೀವಿನಿ,

*”ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಪ್ರಗತಿಪರ ರಾಜ್ಯದಲ್ಲಿ ಕೆಲವೇ ಜನರ ಸೊತ್ತಾಗದೆ ಎಲ್ಲರ ಆ ಜನ್ಮಸಿದ್ದ ಹಕ್ಕಾಗಬೇಕು” ಎಂದು ಹೇಳಿದ್ದಾರೆ.

4. ನೆಹರು ಅವರು ವಿಶ್ವೇಶ್ವರಯ್ಯನವರ ಬಗ್ಗೆ ಏನೆಂದು ಹೇಳಿದ್ದಾರೆ?

ಉ : “ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ.

* ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.

ಅದನ್ನು ನಾವು ತಮ್ಮಿಂದ ಕಲಿಯೋಣ” ಎಂದು ಹೇಳಿದ್ದಾರೆ.

5. ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯನವರು ಮಾಡಿದ ಮಾರ್ಪಾಡುಗಳಾವುವು?

ಉ : * 1913 ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು.

* ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಸ್ಥಾಪಿಸಿದರು.

* ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳನ್ನು ಸ್ಥಾಪಿಸಿದರು.

ಸಾರ್ವಜನಿಕ ಜೀವವಿಮೆ ಯೋಜನೆ ಜಾರಿಗೆ ತಂದರು.

* ಪ್ರಾಂತೀಯ ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಿದರು.

ಸಂದರ್ಭ ಸಹಿತ ಸ್ವಾರಸ್ಯ ಬರೆಯಿರಿ

1. “ಸಾಮಾಜಿಕ ಕಾನೂನುಗಳ ಹರಿಕಾರ.”

2. “ಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು”

ಆಯ್ಕೆ : ಈ ವಾಕ್ಯವನ್ನು ‘ಭಾಗ್ಯಶಿಲ್ಪಿಗಳು’ ಎಂಬ ಗದ್ಯಭಾಗದಲ್ಲಿರುವ ‘ನಾಲ್ವಡಿ ಕೃಷ್ಣರಾಜ ಒಡೆಯರು’ಭಾಗದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯಕ್ಕಾಗಿ ಸಲ್ಲಿಸಿದ ಸೇವೆಯನ್ನು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.

ಸ್ವಾರಸ್ಯ : ಸೇವೆಯ ಪ್ರತಿಫಲ ಸೇವೆಯೇ, ಮೈಸೂರು ರಾಜ್ಯದ ಸರ್ವೋತೋಮುಖ ವಿಕಾಸಕ್ಕಾಗಿ ಸಲ್ಲಿಸಿದ ಸೇವೆ ಇಲ್ಲಿ ಸ್ವಾರಸ್ಯಕರವಾಗಿದೆ.

3. “ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗುರಿಯನ್ನು ಸೇರಿಸಿತು”

ಆಯ್ಕೆ : ಈ ವಾಕ್ಯವನ್ನು ಡಿ.ಎಸ್. ಜಯಪ್ಪಗೌಡ ಅವರ ‘ಭಾಗ್ಯಶಿಲ್ಪಿಗಳು’ ಗದ್ಯದ ‘ಸರ್.ಎಂ.ವಿಶ್ವೇಶ್ವರಯ್ಯ’ ಎಂಬ ಭಾಗದಿಂದ ತೆಗೆದುಕೊಳ್ಳಲಾಗಿದೆ.

ಸಂದರ್ಭ: ವಿಶ್ವೇಶ್ವರಯ್ಯನವರು ಜಲಾಶಯಗಳಿಗೆ ಸ್ವಯಂಚಾಲಿತ ಬಾಗಿಲುಗಳನ್ನು ಆಳವಡಿಸಿದ್ದನ್ನು ವಿವರಿಸುವಾಗ ಈ ಮಾತು ಬಂದಿದೆ.

ಸ್ವಾರಸ್ಯ : ವಿಶ್ವೇಶ್ವರಯ್ಯನವರ ಬುದ್ದಿವಂತಿಕೆಯನ್ನು ಸ್ವಾರಸ್ಯಕರವಾಗಿ ಹೇಳಲಾಗಿದೆ.

4. “ತಾವು ಕಡಿಮೆ ಮಾತನಾಡಿದ್ದೀರಿ ಮತ್ತು ಹೆಚ್ಚು ಕೆಲಸ ಮಾಡಿದ್ದೀರಿ”

ಆಯ್ಕೆ : ಈ ವಾಕ್ಯವನ್ನು ಡಿ.ಎಸ್. ಜಯಪ್ಪಗೌಡ ಅವರ ‘ಭಾಗ್ಯಶಿಲ್ಪಿಗಳು’ ಗದ್ಯದ ‘ಸರ್.ಎಂ.ವಿಶ್ವೇಶ್ವರಯ್ಯ’ ಎಂಬ ಭಾಗದಿಂದ ತೆಗೆದುಕೊಳ್ಳಲಾಗಿದೆ.

ಸಂದರ್ಭ: ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ಅವರ ಶತಮಾನೋತ್ಸವ ಸಮಾರಂಭದಲ್ಲಿ ನೆಹರು ಅವರು ವಿಶ್ವೇಶ್ವರಯ್ಯನವರನ್ನು ಕುರಿತು ಹೇಳುತ್ತಾರೆ.

ಸ್ವಾರಸ್ಯ : ವಿಶ್ವೇಶ್ವರಯ್ಯನವರ ಕಾರ್ಯತತ್ಪರತೆಯನ್ನು ಸ್ವಾರಸ್ಯಕರವಾಗಿ ಹೇಳಲಾಗಿದೆ.

5. “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ದ ಹಕ್ಕಾಗಬೇಕು”

ಆಯ್ಕೆ : ಈ ವಾಕ್ಯವನ್ನು ಡಿ.ಎಸ್.ಜಯಪ್ಪಗೌಡ ಅವರ ‘ಭಾಗ್ಯಶಿಲ್ಪಿಗಳು’ ಗದ್ಯದ ‘ಸರ್ .ಎಂ.ವಿಶ್ವೇಶ್ವರಯ್ಯ” ಎಂಬ ಭಾಗದಿಂದ ತೆಗೆದುಕೊಳ್ಳಲಾಗಿದೆ.

ಸಂದರ್ಭ : ವಿಶ್ವೇಶ್ವರಯ್ಯ ಅವರು ಶಿಕ್ಷಣಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.

ಸ್ವಾರಸ್ಯ : ನಾಡಿನ ಎಲ್ಲರಿಗೂ ಸಮಾನ ಶಿಕ್ಷಣ ಅವಕಾಶಗಳು ದೊರೆಯಬೇಕೆಂಬ ವಿಶ್ವೇಶ್ವರಯ್ಯ ಅವರ ಹಂಬಲ ಈ ಮಾತಿನಲ್ಲಿ ಅಭಿವ್ಯಕ್ತಗೊಂಡಿದೆ.

ಈ] : ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ.

ಉ :* ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ದಿವಾನರಾಗಿ ಆಡಳಿತದಲ್ಲಿ ಹೊಸ ಮಾದರಿಯನ್ನು ಜಾರಿಗೊಳಿಸಿದರು.

* ಕಛೇರಿಯ ಕೆಲಸ ಕಾರ್ಯಗಳಲ್ಲಿ ಹಾಗೂ ಆಡಳಿತದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು.

ಸಂಸ್ಥಾನದಲ್ಲಿ ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕೃತವಾಗಿದ್ದ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಅಧಿಕಾರವನ್ನು ಪ್ರತ್ಯೇಕಗೊಳಿಸಿದರು.

ಸಮರ್ಥ ಕಾರ್ಯನಿರ್ವಹಣೆಗಾಗಿ ಸಮಿತಿಗಳನ್ನು ರಚಿಸಿದರು.

* ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿದರು.

* ತಾಂತ್ರಿಕ ವೃತ್ತಿಪರ ಶಿಕ್ಷಣಕ್ಕೆ ಮತ್ತು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದರು.

* ಭಾಷೆ, ಸಾಹಿತ್ಯ ಮತ್ತು ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಿದರು.

* ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಿದರು.

2. ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ.

ಉ: ಕ್ರಿ.ಶ. 1913 ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು.

* ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಬದಲಾಗಿ ಮೈಸೂರು ಸಂಸ್ಥಾನವೇ ಪ್ರೌಢಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ ಯೋಜನೆಯನ್ನು ಜಾರಿಗೆ ತಂದರು..

* ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿಸಿದರು.

* “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಅಜನ್ಮಸಿದ್ಧ ಹಕ್ಕಾಗಬೇಕು” ಎಂದು ಹೇಳಿದರು.

* ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು.

* ಬೆಂಗಳೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು.

* ಮಹಿಳಾ ಶಿಕ್ಷಣದ ಬಗ್ಗೆ ಸಹಾನುಭೂತಿ ಹೊಂದಿದ್ದ ಇವರು ಗೃಹಶಿಕ್ಷಣ ಶಾಲೆಗಳನ್ನು ಸ್ಥಾಪಿಸಿದರು.

ವಿದ್ಯಾರ್ಥಿ ವೇತನವನ್ನು ಕೊಡುವ ಮೂಲಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟರು.

 

 

 

 

 

 

 

 

 

ಪದ್ಯ ಪಾಠ-3 : ‘ಕೌರವೇಂದ್ರನ ಕೊಂದೆ ನೀನು’

 

ಕವಿ ಪರಿಚಯ: _ಕುಮಾರವ್ಯಾಸ

ಕುಮಾರವ್ಯಾಸ ಕವಿಯು ಸಾ.ಶ ಸುಮಾರು 1430 ರಲ್ಲಿ ಗದಗ ಪ್ರಾಂತ್ಯದ ಕೋಳಿವಾಡದಲ್ಲಿ ಜನಿಸಿದನು.

* ಇವನು ಕುಮಾರವ್ಯಾಸ ಭಾರತ ಮತ್ತು ಐರಾವತ ಎಂಬ ಕೃತಿಗಳನ್ನು ರಚಿಸಿದ್ದಾನೆ.

* ಈತನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಬಿರುದು ಇದೆ.

 

ಅ) ಒಂದು ವಾಕ್ಯದಲ್ಲಿ ಉತ್ತರಿಸಿರಿ.

 

1. ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಕೂರಿಸಿಕೊಳ್ಳುವಾಗ ಏನೆಂದು ಕರೆದನು?

 

ಉ: ಕೃಷ್ಣನು ಕರ್ಣನ ಸಂಗಡ ಮೈದುನತನದ ಸರಸದಿಂದ ಕೈಹಿಡಿದು ಎಳೆದು ರಥದ ಪೀಠದಲ್ಲಿ ಕೂರಿಸಿದನು.

 

2. ಕುಮಾರವ್ಯಾಸನ ಆರಾಧ್ಯ ದೈವ ಯಾರು?

 

ಉ: ಕುಮಾರವ್ಯಾಸನ ಆರಾಧ್ಯ ದೈವ ಗದುಗಿನ ವೀರನಾರಾಯಣ.

 

3. ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು ಯಾರು?

 

ಉ: ಅಶ್ವಿನೀ ದೇವತೆಗಳ ವರಬಲದಿಂದ ಜನಿಸಿದವರು ನಕುಲ ಮತ್ತು ಸಹದೇವ

 

4. ಕುಮಾರವ್ಯಾಸನಿಗಿರುವ ಬಿರುದು ಯಾವುದು?

 

ಉ: ಕುಮಾರವ್ಯಾಸನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದುಇದೆ.

 

5. ನಾರಣಪ್ಪನಿಗೆ ಕುಮಾರವ್ಯಾಸನೆಂಬ ಹೆಸರು ಏಕೆ ಬಂತು?

 

ಉ: ನಾರಣಪ್ಪನು ವ್ಯಾಸರ ಸಂಸ್ಕೃತ ಮಹಾಭಾರತವನ್ನು ಕರ್ಣಾಟ ಭಾರತ ಕಥಾಮಂಜರಿ ಎಂದು ಕನ್ನಡದಲ್ಲಿ ರಚಿಸಿದ್ದರಿಂದ ಕುಮಾರವ್ಯಾಸ ಎಂಬ ಹೆಸರು ಬಂದಿತು.

 

ಅ] ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.

 

1. ಕೃಷ್ಣನು ಕರ್ಣನ ಮನದಲ್ಲಿ ಯಾವ ರೀತಿಯಲ್ಲಿ ಭಯವನ್ನು ಬಿತ್ತಿದನು?

 

ಉ .ಕೃಷ್ಣನು “ಕರ್ಣ ನಿಮಗೂ ಯಾದವ ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ…ನೀನು ನಿಜವಾಗಿ ಭೂಮಿಯ ಒಡೆಯ. ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ” ಎಂದು ಹೇಳುತ ಕರ್ಣನ ಕಿವಿಯಲ್ಲಿ ಭಯವನ್ನು ಬಿತ್ತಿದನು.

 

2.ಕುಂತಿ, ಮಾದ್ರಿಯರು ಯಾರ್ಯಾರ ಅನುಗ್ರಹದಿಂದ ಮಕ್ಕಳನ್ನು ಪಡೆದರು?

 

ಉ:.ಕುಂತಿಯು ಯಮಧರ್ಮನ ಅನುಗ್ರಹದಿಂದ ಧರ್ಮರಾಯನನ್ನು, ವಾಯುವಿನ ಅನುಗ್ರಹದಿಂದ ಭೀಮನನ್ನು, ಇಂದ್ರನ ಅನುಗ್ರಹದಿಂದ ಅರ್ಜುನನನ್ನು ಪಡೆದಳು.

.ಮಾದ್ರಿಯು ಅಶ್ವಿನೀ ದೇವತೆಗಳ ಅನುಗ್ರಹದಿಂದ ನಕುಲ ಸಹದೇವರನ್ನು ಪಡೆದಳು.

 

3. ಕೃಷ್ಣನು ಆಮಿಷಗಳನ್ನು ಒಡ್ಡಿದಾಗ ಕರ್ಣನ ಮನದಲ್ಲಿ ಮೂಡಿದ ಭಾವನೆಗಳೇನು ?

 

ಉ: * ಕರ್ಣನಿಗೆ ಕೊರಳಸೆರೆ ಹಿಗ್ಗಿ, ಕಂಬನಿಯು ಸುರಿದು ಮನಸ್ಸಿನಲ್ಲಿಯೇ “ಅಯ್ಯೋ, ದುರ್ಯೋಧನನಿಗೆ ಕೇಡಾಯಿತು” ಎಂದನು.

* ಹರಿಯ ಹಗೆತನವು ಹೊಗೆ ತೋರದೆ ಸುಡುತ್ತದೆ. ಕೃಷ್ಣನು “ನನ್ನ ವಂಶದ ರಹಸ್ಯವನ್ನು ತಿಳಿಸಿ ಕೊಂದನು” ಎಂದು ಮನದಲ್ಲಿ ನೊಂದು ಕೊಂಡನು.

 

4. ಕೃಷ್ಣನು ಕೌರವೇಂದ್ರನನ್ನು ಕೊಂದನು ಎಂದು ಕರ್ಣ ಹೇಳಲು ಕಾರಣವೇನು ?

 

ಉ: * ಕರ್ಣನು ಕೃಷ್ಣನಿಗೆ “ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವನಲ್ಲ,

* ಪಾಂಡವರು ಕೌರವರು ಸೇವೆಯನ್ನು ಮಾಡುವುದು ನನಗೆ ಇಷ್ಟವಿಲ್ಲ.

* ನನ್ನನ್ನು ಕಾಪಾಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುವ ಆವೇಶದಲ್ಲಿ ಇದ್ದೆನು.

* ಆದರೆ ನೀನು ನನ್ನ ಜನ್ಮರಹಸ್ಯವನ್ನು ತಿಳಿಸಿ ದುರ್ಯೋಧನನನ್ನು ಕೊಂದೆ” ಎಂದನು.

 

 

5. ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನವೇನು?

 

ಉ: ಕರ್ಣನು ಕೃಷ್ಣನನ್ನು ಕುರಿತು “ನಾಳಿನ ಕೌರವರು ಪಾಂಡವರ ನಡುವಿನ ಭಾರತ ಯುದ್ಧದಲ್ಲಿ ಮೃತ್ಯುದೇವತೆಗೆ ಔತಣಕೂಟ ಏರ್ಪಡಿಸುತ್ತೇನೆ.

ಕೌರವನ ಋಣ ತೀರಿಸುವಂತೆ ಹೋರಾಡಿ, ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರ ಕೊಲ್ಲುತ್ತಾ,

* ಅಗತ್ಯ ಬಂದರೆ ದುರ್ಯೋಧನನಿಗಾಗಿ ಪ್ರಾಣವನ್ನು ಬಿಡುವೆನು. ಆದರೆ ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು” ಎಂದನು.

 

ಇ) ಈ ಕೆಳಗಿನ ಹೇಳಿಕೆಗಳಿಗೆ ಸಂದರ್ಭದೊಡನೆ ಸ್ವಾರಸ್ಯವನ್ನು ಬರೆಯಿರಿ.

 

1. “ರವಿಸುತನ ಕಿವಿಯಲಿ ಬಿತ್ತಿದನು ಭಯವ.”

2. “ಬಾಯ್ದಂಬುಲಕೆ ಕೈಯಾನುವರೆ.”

3. “ಜೀಯ ಹಸಾದವೆಂಬುದು ಕಷ್ಟ”

4. “ನಿನ್ನಪದೆಸೆಯ ಬಯಸುವನಲ್ಲ”

 

ಆಯ್ಕೆ: ಈ ವಾಕ್ಯವನ್ನು ಕುಮಾರವ್ಯಾಸನು ಬರೆದಿರುವ ‘ಕುಮಾರವ್ಯಾಸ ಭಾರತ’ ಕೃತಿಯಿಂದ ಆಯ್ದ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯದಿಂದ

 

ಸಂದರ್ಭ: ಕೃಷಣ್ಣು ಪಾಂಡವ ಕೌರವರ ನಡುವೆ ಸಂಧಾನ ಮಾಡಲು ಬಂದು ವಿಫಲನಾಗಿ ಹಿಂದಿರುಗುವಾಗ ಕರ್ಣನೊಂದಿಗೆ ಮೈಮನತನದ ಸರಸದಲ್ಲಿ ಮಾತನಾಡಿಸುತ್ತಾ ಜನ್ಮರಹಸ್ಯ ತಿಳಿಸಿ, ಆಮಿಷಗಳನ್ನು ಒಡ್ಡುವ ಕೃಷ್ಣ ಕರ್ಣರ ನಡುವಿನ ಸಂವಾದದಲ್ಲಿ ಈ ಮಾತು ಬಂದಿದೆ.

 

ಸ್ವಾರಸ್ಯ: ಕೃಷ್ಣನ ಆಮಿಷ ಹಾಗೂ ಕರ್ಣನ ಸ್ವಾಮಿನಿಷ್ಠ ವ್ಯಕ್ತಿತ್ವ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.

 

5. “ಮಾರಿಗೌತಣವಾಯ್ತು ನಾಳಿನ ಭಾರತವು”

 

ಆಯ್ಕೆ: ಈ ವಾಕ್ಯವನ್ನು ಕುಮಾರವ್ಯಾಸನು ಬರೆದಿರುವ ‘ಕುಮಾರವ್ಯಾಸ ಭಾರತ’ ಕೃತಿಯಿಂದ ಆಯ್ದ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯದಿಂದ

 

ಸಂದರ್ಭ: “ನಾಳಿನ ಕೌರವರು ಪಾಂಡವರ ನಡುವಿನ ಭಾರತ ಯುದ್ಧದಲ್ಲಿ ಮೃತ್ಯುದೇವತೆಗೆ ಔತಣಕೂಟ ಏರ್ಪಡಿಸುತ್ತೇನೆ ಎಂದು ಹೇಳುವಾಗ ಕರ್ಣ ಕೃಷ್ಣನಿಗೆ ಹೇಳುವಾಗ ಈ ಮಾತು ಬಂದಿದೆ.

 

ಸ್ವಾರಸ್ಯ: ಕರ್ಣನ ಸ್ವಾಮಿನಿಷ್ಠ ವ್ಯಕ್ತಿತ್ವ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.

 

ಈ) ಮೌಲ್ಯವನ್ನಾಧರಿಸಿ ಭಾವಾರ್ಥ ಬರೆಯಿರಿ:

 

* ಈ ಪದ್ಯವನ್ನು ಕುಮಾರವ್ಯಾಸನು ಬರೆದಿರುವ ‘ಕೌರವೇಂದ್ರನ ಕೊಂದೆ ನೀನು” ಎಂಬ ಪದ್ಯದಿಂದ ಆರಿಸಲಾಗಿದೆ.

* ಮೌಲ್ಯ: ಇಲ್ಲಿ ಕರ್ಣನನ್ನು ಮನವೊಲಿಸುವ ಕೃಷ್ಣನ ಮಾತುಗಳು ಮತ್ತು ಕರ್ಣನ ಸ್ವಾಮಿನಿಷ್ಠೆ, ಪ್ರಾಮಾಣಿಕತೆ ಮೂಡಿಬಂದಿದೆ.

* ಕರ್ಣ ನಿಮಗೂ ಯಾದವ ಕೌರವರಿಗೂ ಭೇದವಿಲ್ಲ. ನಿನ್ನನ್ನು ರಾಜನನ್ನಾಗಿ ಮಾಡುವೆನು.

ಕೌರವರು, ಪಾಂಡವರು, ಮಾದ್ರ, ಮಾಗಧ, ಯಾದವರು ನಿನ್ನ ಸೇವೆ ಮಾಡುವರು.

* ಅದನ್ನು ಬಿಟ್ಟು ನೀನು ದುರ್ಯೋಧನನ ಬಾಯೆಂಜಲಿಗೆ ಕೈಯೊಡ್ಡುವುದೇ?

* ದುರ್ಯೋಧನ ಹೇಳಿದ ಮಾತಿಗೆಲ್ಲಾ ‘ಒಡೆಯ ಪ್ರಸಾದ’ ಎಂಬುದು ನಿನಗೆ ಹೀನವೆನಿಸುವುದಿಲ್ಲವೇ?” ಎಂದು ಆಮಿಷಗಳನ್ನು ಒಡ್ಡಿದನು.

* ಆಗ ಕರ್ಣನು, “ನಾನು ಈ ರಾಜ್ಯಕ್ಕೆ ಸೋಲುವವನಲ್ಲ. ಪಾಂಡವರು ಮತ್ತು ಕೌರವರಿಂದ ಸೇವೆ ಮಾಡಿಕೊಳ್ಳುವುದುನನಗೆ ಇಷ್ಟವಿಲ್ಲ.

* ನನ್ನನ್ನು ಕಾಪಾಡಿದ ಒಡೆಯನಿಗೆ ಶತ್ರುಗಳ ತಲೆಯನ್ನು ಕತ್ತರಿಸಿ ಒಪ್ಪಿಸುತ್ತೇನೆಂಬ ಉತ್ಸಾಹದಲ್ಲಿದ್ದೆ.

* ಆದರೆ ನೀನು ನನ್ನ ಜನ್ಮ ರಹಸ್ಯವನ್ನು ಹೇಳಿ ಕೌರವನನ್ನು ಕೊಂದೆ” ಎಂದು ಕರ್ಣನು ದುಃಖಿಸುತ್ತಾನೆ.

 

ಪದ್ಯ ಕಂಠಪಾಠ ಮಾಡಿ

 

ಕೊರಳ ಸೆರೆ ಹಿಗ್ಗಿದವು ಗುಜಲ

ಉರವಣಿಸಿ ಕಡು ನೊಂದನಕಟಾ

ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ

 

ಹರಿಯ ಹಗೆ ಹೊಗೆದೋರದುರುಹ

ಬರಿದೆ ಹೋಹುದೆ ತನ್ನ ವಂಶವ

ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ

 

ಅಥವಾ

 

ಭಾರತವು

ಚತುರಂಗ ಬಲದಲಿ

ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು

 

ತೀರಿಸಿಯೆ ಪತಿಯವಸರಕ್ಕೆ 5

 

ರೀರವನು ನೂಕುವೆನು ನಿನ್ನಯ

 

ವೀರರೈವರ ನೋಯಿಸೆನು ರಾಜೀವಸಖನಾಣೆ

ಗದ್ಯ ಪಾಠ – 04 : ‘ಎದೆಗೆ ಬಿದ್ದ ಅಕ್ಷರ’

 

ಲೇಖಕರ ಪರಿಚಯ: ದೇವನೂರ ಮಹಾದೇವ

 

* ದೇವನೂರ ಮಹಾದೇವ ಅವರು ಸಾ.ಶ 1949 ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ ಜನಿಸಿದರು.

 

* ಅವರು ಎದೆಗೆ ಬಿದ್ದ ಅಕ್ಷರ, ಕುಸುಮಬಾಲೆ, ದ್ಯಾವನೂರು, ಒಡಲಾಳ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

 

ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

 

ಅ) ಒಂದು ವಾಕ್ಯದಲ್ಲಿ ಉತ್ತರಿಸಿ

 

1. ಇಂದಲ್ಲ ನಾಳೆ ಫಲ ಕೊಡುವ ಆಂಶಗಳು ಯಾವುವು?

 

ಉ : ‘ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ’ ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿದೆ.

 

2. ದೇವನೂರರ ‘ನನ್ನ ದೇವರು’ ಯಾರೆಂಬುದನ್ನು ಸ್ಪಷ್ಟಿಕರಿಸಿ.

 

ಉ : ಚಾವಣೆ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ದನನ್ನು ಇಟ್ಟರೆ ಅದು ದೇವನೂರು ಮಹಾದೇವ ಅವರ ದೇವರಾಗುತ್ತದೆ.

 

3. ಮನೆ ಮಂಚಮ್ಮ ಯಾರು?

 

ಉ : ಮನೆ ಮಂಚಮ್ಮ ಗ್ರಾಮದೇವತೆ.

 

4. ಮನೆಮಂಚಮ್ಮನ ಕತೆ ಹೇಳಿದ ಕವಿ ಯಾರು?

 

ಉ : ಮನೆಮಂಚಮ್ಮನ ಕತೆ ಹೇಳಿದ ಕವಿ ಸಿದ್ದಲಿಂಗಯ್ಯ

 

5. ‘ಶಿವಾನುಭವ ಶಬ್ದಕೋಶ’ ಪುಸ್ತಕ ಬರೆದವರು ಯಾರು?

 

ಉ : ‘ಶಿವಾನುಭವ ಶಬ್ದಕೋಶ’ ಪುಸ್ತಕ ಬರೆದವರು ಹಳಕಟ್ಟಿಯವರು.

 

6. ವಚನಕಾರರಿಗೆ ಯಾವುದು ದೇವರಾಗಿತ್ತು?

 

ಉ: ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.

 

7. ಅಶೋಕ ಪೈ ಅವರ ವೃತ್ತಿಯಾವುದು?

 

ಉ : ಅಶೋಕ ಪೈ ಅವರು ಮನೋವೈದ್ಯರು.

 

ಆ) ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಟ

 

1. ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯವೇನು?

 

ಉ : * ಟೆಲಿವಿಷನ್ ನೋಡುತ್ತಿದ್ದವರ ಮಃಖ ಅಥವಾ ಸಂತಸದ ಭಾವನೆಯು ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ.

 

* “ಯಾವುದೇ ಒಂದು ಜೀವಿಗೆ ಆಗುವ ದುಃಖ-ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ,

 

* ಎಲ್ಲಾ ಜೀವಿಗಳಲ್ಲೂ ಕಂಪನ ಉಂಟುಮಾಡುತ್ತಿರುತ್ತದೆ” ಎಂಬುದು ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯ.

 

2. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು? ವಿವರಿಸಿ.

 

ಉ : * ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ‘ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ;

 

* ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು. ಅದು ಕೇಳಿ ತಿಳಿದಿದ್ದಲ್ಲ, ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ,

 

ಅದು ತರ್ಕವಲ್ಲ, ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು..

 

ಈ ಸಂದರ್ಭ ಸಹಿತ ಸ್ವಾರಸ್ಯ ಬರೆಯಿರಿ:

 

1. “ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ. ಅಥವಾ “ಏನಯ್ಯಾ ಏನ್ ಮಾಡ್ತಾ ಇದ್ದೀರಿ?”

 

ಆಯ್ಕೆ:-ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ ‘ಎದೆಗೆ ಬಿದ್ದ ಅಕ್ಷರ’ ಎಂಬ ಗದ್ಯಪಾಶದಿಂದ ಆರಿಸಲಾಗಿದೆ.

 

ಸಂದರ್ಭ:- ಗ್ರಾಮದೇವತೆ ಮಂಚಮ್ಮನಿಗೆ ಜನರು ಗುಡಿಕಟ್ಟುತ್ತಿದ್ದ ಸಂದರ್ಭದಲ್ಲಿ ಒಬ್ಬನ ಮೈ ಮೇಲೆ ಬಂದು ಈ ಮಾತನ್ನು ಹೇಳುತ್ತಾಳೆ.

 

ಸ್ವಾರಸ್ಯ- ತನ್ನ ಭಕ್ತರಿಗೆ ಮನೆ ಇಲ್ಲದ ಮೇಲೆ ನನಗೂ ಮನೆ ಬೇಡ ಎಂಬ ಮಂಚಮ್ಮದೇವತೆಯ ಮಾತು ಸಮಾನತೆಯ ಸಂಕೇತವಾಗಿದೆ.

 

2. “ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.”

 

3. “ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು”

 

4. “ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ.”

 

ಆಯ್ಕೆ:-ಈ ವಾಕ್ಯವನ್ನು ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಗದ್ಯಪಾಠದಿಂದ ಆರಿಸಲಾಗಿದೆ.

 

ಸಂದರ್ಭ:- ದೇವನೂರರು ಕರುಣೆ, ಸಮತೆ, ಪ್ರಜ್ಞೆ ಹಾಗೂ ಜಾಗತೀಕರಣದ ಬಗ್ಗೆ ಹೇಳುವ ಮಾತು ಇದಾಗಿದೆ.

 

ಸ್ವಾರಸ್ಯ:- ಬದುಕಿನ ನಡೆನುಡಿಗಳ ವಿಧಾನ ಮತ್ತು ಜೀವಿಗಳ ನಡುವಿನ ಸಂಬಂಧಗಳ ಮಹತ್ವ ಸ್ವಾರಸ್ಯಕರವಾಗಿ ಬಂದಿದೆ.

 

 

 

 

ಉ) : ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ. :

 

1. ಕವಿ ಸಿದ್ಧಲಿಂಗಯ್ಯನವರು ಹೇಳಿದ ಕತೆಯನ್ನು ಬರೆಯಿರಿ.

 

ಉ : * ಕವಿ ಸಿದ್ಧಲಿಂಗಯ್ಯನವರು ಹೇಳಿದ ಕತೆಯೆಂದರೆ- ಒಮ್ಮೆ ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ.

 

*. ಗುಡಿಯ ಕಟ್ಟಡ ಚಾವಣಿಯವರೆಗೂ ಮೇಲೇಳುತ್ತದೆ. ಆಗ ಇದ್ದಕ್ಕಿದ್ದಂತೆಯೇ ಮಂಚಮ್ಮದೇವಿ ಭಕ್ತನೊಬ್ಬನ ಮೇಲೆ ಬಂದು

 

“ಏನ್ ಮಾಡ್ತಾ ಇದ್ದೀರಿ?” ಎಂದು ಕೇಳುತ್ತಾಳೆ.

 

“ನಿನಗೊಂದು ಗುಡಿಕಡ್ತಾ ಇದ್ದೀವಿ, ತಾಯಿ” ಎಂದು ಹೇಳಿದಾಗ ‘ನಿಮಗೆಲ್ಲಾ ಮನೆ ಉಂಟಾ?’ ಎಂದು ಕೇಳುತ್ತಾಳೆ.

 

* ಅದಕ್ಕೆ ಉತ್ತರವಾಗಿ ಅಲ್ಲೊಬ್ಬ ‘ನನಗಿಲ್ಲ ತಾಯಿ’ ಎಂದು ಹೇಳುತ್ತಾನೆ.

 

* ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೂ ನನಗೂ ಬೇಡ ಎಂದು ಮಂಚಮ್ಮತಾಯಿ ಹೇಳುತ್ತಾಳೆ.

 

* ಅಂದಿನಿಂದ ಮಂಚಮ್ಮ ‘ಮನೆ ಮಂಚು’ ಎಂದೇ ಪ್ರಸಿದ್ಧಳಾದಳು.

 

ಪದ್ಯ-01 : “ಸಂಕಲ್ಪ ಗೀತೆ”

 

ಕವಿ ಕೃತಿ ಪರಿಚಯ.. ಜಿ.ಎಸ್ ಶಿವರುದ್ರಪ್ಪ

 

* ಜಿ.ಎಸ್ ಶಿವರುದ್ರಪ್ಪ ಅವರು ಸಾ. ಶ. 1926 ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು.

* ಇವರು ‘ಸಾಮಗಾನ’, ‘ಚೆಲುವು-ಒಲವು’, ‘ದೇವಶಿಲ್ಪ’, ‘ಅನಾವರಣ’, ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

* ಇವರಿಗೆ ‘ಕೇಂದ್ರಸಾಹಿತ್ಯ ಅಕಾಡೆಮಿಪ್ರಶಸ್ತಿ’, ‘ನಾಡೋಜ’ಪ್ರಶಸ್ತಿ, ‘ರಾಷ್ಟ್ರಕವಿ’ಪ್ರಶಸ್ತಿಗಳು ದೊರೆತಿದೆ.

 

ಅ) ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ

 

1. ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು?

 

ಉ : ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲ್ಲಿ ಮುನ್ನಡೆಸಬೇಕು.

 

2. ぱ?

 

ಉ : ನವೀಜಲಗಳು ಕಲುಷಿತವಾಗಿದೆ.

 

3. ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?

ಉ : ಕಲುಷಿತವಾಗಿರುವ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.

 

4. ಕಾಡುಮೇಡುಗಳ ಸ್ಥಿತಿ ಹೇಗಿದೆ?

ಉ : ಕಾಡುಮೇಡುಗಳು ಬರಡಾಗಿದೆ.

 

5. ಯಾವ ಎಚ್ಚರದೊಳು ಬದುಕಬೇಕಿದೆ?

ಉ : ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು ಬದುಕಬೇಕಿದೆ.

 

ಅ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

 

1. ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ?

 

ಉ :* ನಮ್ಮ ಸುತ್ತಲೂ ಹಬ್ಬಿರುವ ದ್ವೇಷದ ಕತ್ತಲೆಯನ್ನು ಕಳೆಯಲು ಪ್ರೀತಿಯ ದೀಪ ಹಚ್ಚಬೇಕು.

* ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸಬೇಕಿದೆ.

 

2. ಕಾಡುಗಳಿಗೆ ಹೇಗೆ ಮುಟ್ಟಬೇಕಿದೆ?

ಉ : ಪರಿಸರ ಮಾಲಿನ್ಯದಿಂದ ಕಲುಷಿತವಾಗಿರುವ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.

* ಬರಡಾಗಿರುವ ಕಾಡುಮೇಡುಗಳನ್ನು ವಸಂತವಾಗಿ ಮುಟ್ಟಬೇಕಿದೆ.

 

3. ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?

 

ಉ :* ಸಮಾಜವನ್ನು ಹೊಸ ಭರವಸೆಗಳ ಮೂಲಕ ಮೇಲೆತ್ತಬೇಕು.

* ಮನುಜರ ನಡುವಿನ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡವಿ, ಸಮಾನತೆಯಯನ್ನು ಮೂಡಿಸುವ ಸೇತುವೆಯಾಗಬೇಕು.

 

4. ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು?

 

ಉ : ಎಲ್ಲಾ ಮತಗಳು ನಮಗೆ ದಾರಿ ತೋರುವ ದಾರಿ ದೀಪಗಳು ಎಂಬ ಎಚ್ಚರದಲ್ಲಿ ಬದುಕಬೇಕಿದೆ.

* ಭಯ-ಸಂಶಯಗಳಿಂದ ಮಸುಕಾದ ಕಣ್ಣುಗಳಲ್ಲಿ ಭವಿಷ್ಯದ ಒಳ್ಳೆಯ ಕನಸು ಕಾಣುವಂತೆ ಮಾಡಬೇಕಾಗಿದೆ.

 

ಇ) ಸಂದರ್ಭಸಹಿತ ಸ್ವಾರಸ್ಯ ಬರೆಯಿರಿ.

 

1. “ಪ್ರೀತಿಯ ಹಣತೆಯ ಹಟ್ಟೋಣ”

 

2. “ಮುಂಗಾರಿನ ಮಳೆಯಾಗೋಣ”

 

3. “ಹೊಸ ಭರವಸೆಗಳ ಕಟ್ಟೋಣ”

 

4. “ಹೊಸ ಎಚ್ಚರದೊಳು ಬದುಕೋಣ”

 

ಆಯ್ಕೆ: ಈ ವಾಕ್ಯವನ್ನು ಶ್ರೀ ಜಿ. ಎಸ್. ಶಿವರುದ್ರಪ್ಪ ಅವರ ‘ಎದೆತುಂಬಿ ಹಾಡಿದೆನು’ ಕವನ ಸಂಕಲನದ ‘ಸಂಕಲ್ಪಗೀತೆ’ ಪದ್ಯದಿಂದ ಆರಿಸಲಾಗಿದೆ.

ಸಂದರ್ಭ: “ಕವಿ ಜೀವನದಲ್ಲಿ ಧನಾತ್ಮಕ ಮನೋಭಾವನೆಯ ದೃಢ ಸಂಕಲ್ಪವನ್ನು ಹೊಂದಿರಬೇಕು” ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ.

ಸ್ವಾರಸ್ಯ: ನಾವು ಜೀವನದಲ್ಲಿ ಪ್ರೀತಿಯ ದೀಪ ಹಚ್ಚುವ ಸಂಕಲ್ಪ ಕೈಗೊಳ್ಳುವುದರಿಂದ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.

 

ಈ] ಮೌಲ್ಯವನ್ನಾಧರಿಸಿ ಸಾರಾಂಶವನ್ನು ಬರೆಯಿರಿ.

 

* ಕವಿ ಜಿ.ಎಸ್.ಶಿವರುದ್ರಪ್ಪನವರು ಬರೆದಿರುವ ಎದೆತುಂಬಿ ಹಾಡಿದೆನು ಕವನಸಂಕಲನದಿಂದ ಆಯ್ದ ‘ಸಂಕಲ್ಪಗೀತೆ’ ಪದ್ಯಭಾಗದಲ್ಲಿ: ನಾವು ಜೀವನದಲ್ಲಿ ಧನಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುವ ದೃಢಸಂಕಲ್ಪ ಹೊಂದಬೇಕೆಂದು ಹೇಳಿದ್ದಾರೆ.

*ಭೇದಭಾವಗಳನ್ನು ಹೋಗಲಾಡಿಸಿ, ಭಯ ಮತ್ತು ಅನುಮಾನ ಆವರಿಸಿರುವ ಸಮಾಜವನ್ನು ಪ್ರೀತಿ-ಸಹಕಾರಗಳ ಸಂಕಲ್ಪದಿಂದ ಉತ್ತಮ ಗೊಳಿಸಬೇಕೆಂಬುದು ಇಲ್ಲಿರುವ ಮೌಲ್ಯವಾಗಿದೆ.

 

ಉ) ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ.

 

1. ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಜಿ ಎಸ್ ಶಿವರುದ್ರಪ್ಪನವರ ಆಶಯವಾಗಿದೆ?

 

ಉ: ನಮ್ಮ ಸುತ್ತಲೂ ಹಬ್ಬಿರುವ ದ್ವೇಷದ ಕತ್ತಲೆಯನ್ನು ಕಳೆಯಲು ಪ್ರೀತಿಯ ದೀಪಹಚ್ಚಬೇಕು.

*. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸಬೇಕು.

*. ಪರಿಸರ ಮಾಲಿನ್ಯದಿಂದ ಕಲುಷಿತವಾಗಿರುವ ನವೀಜಲಗಳಿಗೆ ಶುದ್ದೀಕರಿಸಲು ಮುಂಗಾರಿನ ಮಳೆಯಾಗಬೇಕು.

*. ಬರಡಾಗಿರುವ ಕಾಡುಮೇಡುಗಳನ್ನು ಹಚ್ಚ ಹಸಿರಾಗಿಸುವ ವಸಂತಕಾಲವಾಗಬೇಕು.

*. ಅತ್ಯಾಚಾರ,ಅನಾಚಾರ, ಭ್ರಷ್ಟಾಚಾರ. ಅಸ್ಪೃಶ್ಯತೆ, ಅಸಮಾನತೆಗಳಿಂದ ಕೂಡಿರುವ ಸಮಾಜವನ್ನು ಹೊಸ ಭರವಸೆಗಳ ಮೂಲಕ ಮೇಲೆತ್ತುವಂತಾಗಬೇಕು.

*. ಮನುಜರ ನಡುವೆ ಉಂಟಾಗಿರುವ ಆಸಮಾನತೆಯ ಅಡ್ಡಗೋಡೆಗಳನ್ನು ಕೆಡವಿ, ಸಮಾನತೆಯಯನ್ನು ಮೂಡಿಸುವ ಸೇತುವೆಯಾಗಬೇಕು.

*. ಎಲ್ಲಾ ಮತಗಳು ನಮಗೆ ದಾರಿ ತೋರುವ ದಾರಿ ದೀಪಗಳು ಎಂಬ ಎಚ್ಚರದಲ್ಲಿ ಬದುಕಬೇಕಿದೆ.

*. ಭಯ-ಸಂಶಯಗಳಿಂದ ಮಸುಕಾದ ಕಣ್ಣುಗಳಲ್ಲಿ ಭವಿಷ್ಯದ ಒಳ್ಳೆಯ ಕನಸು ಕಾಣುವಂತೆ ಮಾಡಬೇಕಾಗಿದೆ.

ಎಂಬ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿಯ ಆಶಯವಾಗಿದೆ.

 

ಕಂಠಪಾಠದ ಪದ್ಯ

 

ಕಲುಷಿತವಾದೀ ನದೀಜಲಗಳಿಗೆ

ಮುಂಗಾರಿನ ಮಳೆಯಾಗೋಣ.

ವಸಂತವಾಗುತ ಮುಟ್ಟೋಣ

 

ಅಥವಾ

 

ಕಂಠಪಾಠದ ಪದ್ಯ

 

ಮತಗಳೆಲ್ಲವೂ ಪಥಗಳು ಎನ್ನುವ

ಹೊಸ ಎಚ್ಚರದೊಳು ಬದುಕೋಣ

ಭಯ -ಸಂಶಯದೊಳು ಕಂದಿದ ಕಣೋಳು

ನಾಳಿನ ಕನಸನು ಬಿತ್ತೋಣ

 

ಪದ್ಯಪಾಠ – 2 : ‘ಹಕ್ಕಿ ಹಾರುತಿದೆ ನೋಡಿದಿರಾ’

 

ಕವಿ ಪರಿಚಯ: ದ.ರಾ. ಬೇಂದ್ರೆ

* ದ.ರಾ ಬೇಂದ್ರೆ ಅವರು ಸಾ ಶ. 1896 ರಲ್ಲಿ ಧಾರವಾಡದಲ್ಲಿ ಜನಿಸಿದರು.

* ಇವರು ಗರಿ, ನಾಕುತಂತಿ, ನಾದಲೀಲೆ ಅರುಳು-ಮರಳು ಮೊದಲಾದ ಕವನ ಸಂಕಲನಗಳನ್ನು ರಚಿಸಿದ್ದಾರೆ.

* ಇವರಿಗೆ ಪದ್ಮಶ್ರೀ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಲಭಿಸಿದೆ.

 

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

 

1. ಹಕ್ಕಿಯು ಯಾವ ವೇಗದಲ್ಲಿ ಹಾರುತ್ತಿದೆ?

ಉ: ಹಕ್ಕಿಯು ಎದೆತೆರೆದಿಕ್ಕುವ ಹೊತ್ತಿನ ಒಳಗೆ ಗಾವುದ ಗಾವುದ ವೇಗದಲ್ಲಿ ಹಾರುತ್ತಿದೆ.

 

2.ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?

ಉ: ಬಿಳಿ ಮತ್ತು ಹೊಳೆಯುವ ಬಣ್ಣದ ಗರಿಗಳಿವೆ.

 

3.ಕಾಲ ಪಕ್ಷಿಯ ಕಣ್ಣುಗಳು ಯಾವುವು?

ಉ: ಸೂರ್ಯ ಮತ್ತು ಚಂದ್ರರು ಕಾಲ ಪಕ್ಷಿಯ ಕಣ್ಣುಗಳು.

 

4.ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?

ಉ: ಹಕ್ಕಿಯು ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ.

 

 

5. ಹಕ್ಕಿಯು ಯಾರನ್ನು ಹರಸಿದೆ!

ಉ: ಹಕ್ಕಿಯು ಹೊಸಗಾಲದ ಹಸು ಮಕ್ಕಳನ್ನು ಹರಸಿದೆ.

 

6. ಹಕ್ಕಿಯು ಯಾವುದರ ಸಂಕೇತವಾಗಿದೆ?

ಉ: ಹಕ್ಕಿಯು ಕಾಲದ ಸಂಕೇತವಾಗಿದೆ.

 

7. ಹಕ್ಕಿಯ ಚುಂಚಿಗಳು ಎಲ್ಲಿಯವರೆಗೂ ಚಾಚಿದೆ?

ಉ: ಹಕ್ಕಿಯ ಚುಂಚಗಳು ದಿಗ್ಧಂಡಲಗಳ ಅಂಚಿನವರೆಗೂ ಚಾಚಿದೆ.

 

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

 

1. ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೇಗೆ ಹೋಲಿಸಿದ್ದಾರೆ?

 

ಉ :* ಕಾಲ ಪಕ್ಷಿಯು ಆಕಾಶ ಮೋಡ ಭೂಮಿಯನ್ನು ಸಮಬಣ್ಣವಾಗಿ ಮಾಡಿಕೊಂಡು

* ಮುಗಿಲಿಗೆ ರೆಕ್ಕೆ ಬೀಸುತ್ತಾ ಚಿಕ್ಕಿಯಮಾಲೆಯನ್ನು ಸೆಕ್ಕಿಸಿಕೊಂಡು

* ಸೂರ್ಯ-ಚಂದ್ರರನ್ನು ಕಣ್ಣಾಗಿ ಮಾಡಿಕೊಂಡು ಹಾರುತ್ತಿದೆ.

 

2. ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ?

 

ಉ: * ಕಾಲ ಪಕ್ಷಿಯು ಯುಗಯುಗದ ಕೆಟ್ಟದ್ದನ್ನು ಅಳಿಸಿ ಪರಿವರ್ತನೆಗೆ ಅವಕಾಶ ನೀಡಿದೆ.

* ತನ್ನ ರೆಕ್ಕೆಯನ್ನು ಬೀಸುತ್ತಾ ಎಲ್ಲರಲ್ಲೂ ಶಕ್ತಿ ತುಂಬಿ ಮುಂದಿನ ಮಕ್ಕಳಿಗೆ ಶುಭ ಹಾರೈಸಿದೆ.

 

3.ಹಕ್ಕಿಯು ಯಾವ ಮೇರೆ ಮೀರಿ ನೀರನ್ನು ಹೀರಿದೆ?

 

ಉ : ಕಾಲಪಕ್ಷಿಯು ಶುಕ್ರ ಗ್ರಹದ ಗಡಿಯನ್ನು ಮೀರಿ; ಚಂದ್ರಲೋಕದ ನೀರನ್ನು ಹೀರಿ: ಆಟವಾಡಲು ಮಂಗಳ ಲೋಕದ ಅಂಗಳಕೇರಿದೆ.

 

4.ಕಾಲ ಪಕ್ಷಿಯ ಭೌತಿಕರೂಪವನ್ನು ವಿವರಿಸಿ.

 

ಉ:* ಕಾಲ ಪಕ್ಷಿಯು ಕಪ್ಪು ಮತ್ತು ಬಿಳಿ ಬಣ್ಣದ ಪುಚ್ಚಗಳನ್ನು ಹೊಂದಿದೆ. ಬಿಳಿ ಮತ್ತು ಹೊಳೆಯುವ ಬಣ್ಣದ ಗರಿಗಳಿವೆ.

 

* ಕೆಂಪಾದ ಮತ್ತು ಹೊನ್ನಿನ ಬಣ್ಣ ಬಣ್ಣದ ರೆಕ್ಕೆಗಳೆರಡನ್ನು ಹೊಂದಿದೆ. ಇದು ಕಾಲ ಪಕ್ಷಿಯ ಭೌತಿಕ ವರ್ಣನೆಯಾಗಿದೆ.

 

ಇ] ಸಂದರ್ಭ ಸಹಿತ ಸ್ವಾರಸ್ಯ ಬರೆಯಿರಿ:

 

1. “ರೆಕ್ಕೆಗಳೆರಡೂ ಪಕ್ಕದಲ್ಲುಂಟು”

 

2. “ಸಾರ್ವಭೌಮರ ನೆತ್ತಿಯ ಕುಕ್ಕಿ”

 

3. “ಬಲ್ಲರು ಯಾರಾ ಹಾಕಿದೆ ಹೊಂಚ”

 

4. “ಹೊಸಗಾಲದ ಹಸುಮಕ್ಕಳ ಹರಸಿ”

 

5. “ಮಂಗಳ ಲೋಕದ ಅಂಗಳಕೇರಿ”

 

ಆಯ್ಕೆ : ಈ ವಾಕ್ಯವನ್ನು ದ.ರಾ.ಬೇಂದ್ರೆ ಅವರ ‘ಗರಿ’ ಕವನ ಸಂಕಲನದ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದ ಆರಿಸಲಾಗಿದೆ.

 

ಸಂದರ್ಭ : ಕವಿ ಬೇಂದ್ರೆಯವರು ಕಾಲದ ಗತಿಯನ್ನು ಹಾರುವ ಹಕ್ಕಿಗೆ ಹೋಲಿಸಿ ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ.

 

ಸ್ವಾರಸ್ಯ : ಕಾಲ ಪಕ್ಷಿಯ ಹೊಡೆತಕ್ಕೆ ಮಾನವ ಪ್ರಪಂಚದಲ್ಲಾಗುವ ವಿಸ್ಮಯ, ಬದಲಾವಣೆಗಳನ್ನು ತಿಳಿಸಿರುವುದು ಇಲ್ಲಿನ ಸ್ವಾರಸ್ಯವಾಗಿದೆ.

 

ಈ। ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ:

 

ಇದನ್ನು ದ.ರಾ.ಬೇಂದ್ರೆ ಅವರ ‘ಗರಿ’ ಕವನ ಸಂಕಲನದಿಂದ ಆಯ್ದ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬಪದ್ಯದಿಂದ ಆರಿಸಲಾಗಿದೆ.

 

* ಮೌಲ್ಯ: ಕಾಲ ಪಕ್ಷಿಯ ಹೊಡೆತಕ್ಕೆ ಮಾನವ ಪ್ರಪಂಚದಲ್ಲಾಗುವ ವಿಸ್ಮಯ, ಬದಲಾವಣೆಗಳನ್ನು ತಿಳಿಸಿರುವುದು ಇಲ್ಲಿನ ಮೌಲ್ಯವಾಗಿದೆ.

 

ಉ] ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

 

1. ಹಕ್ಕಿಯನ್ನು ಕಾಲದಗತಿಗೆ ಹೋಲಿಸುತ್ತಾ ಕವಿ ಹೇಳಿರುವ ಮಾತುಗಳಾವುದು?

 

* ಹಗಲು-ರಾತ್ರಿಯ ಬದಲಾವಣೆಯೊಂದಿಗೆ, ಎಲ್ಲಾ ದಿಕ್ಕಿನಲ್ಲೂ ವ್ಯಾಪಿಸುತ್ತಾ ಕಣ್ಣಿನ ರೆಪ್ಪೆ ಮುಚ್ಚಿ ತೆಗೆಯುವ ಒಳಗೆ ಗಾವುದ ವೇಗದಲ್ಲಿ ಒಡುತ್ತಿದೆ.

* ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲದ ರೂಪವನ್ನು ಮೂಡಿಸಿ, ಸೂರ್ಯೋದಯ ಮತ್ತು ಸೂರ್ಯಾಸ್ತದ ರೆಕ್ಕೆಯೊಂದಿಗೆ ಹಾರುತ್ತಿದೆ.

* ಕಾಲ ಪಕ್ಷಿಯು ಆಕಾಶ ಮೋಡ ಭೂಮಿಯನ್ನು ಸಮಬಣ್ಣವಾಗಿ ಮಾಡಿಕೊಂಡು ಮುಗಿಲಿಗೆ ರೆಕ್ಕೆ ಬೀಸುತ್ತಾ ಚಿಕ್ಕಿಯಮಾಲೆಯನ್ನು ಸೆಕ್ಕಿಸಿಕೊಂಡು ಸೂರ್ಯ-ಚಂದ್ರರನ್ನು ಕಣ್ಣಾಗಿ ಮಾಡಿಕೊಂಡು ಹಾರುತ್ತಿದೆ.

* ಕಾಲದ ಪಕ್ಷಿಯು ತೆನೆಯಿಂದ ಕಾಳನ್ನು ಬೇರ್ಪಡಿಸುವಂತೆ ಭೂಮಂಡಲದ ಸಾಮ್ರಾಜ್ಯಗಳನ್ನು ಬೇರ್ಪಡಿಸಿ ಖಂಡ ಖಂಡಗಳನ್ನು ತೇಲಿಸಿ ಮುಳುಗಿಸುತ್ತಾ ಅಹಂಕಾರದಿಂದ ಮೆರೆದಿರುವವರನ್ನು ನಾಶಮಾಡುತ್ತಾ ಹಾರಿದೆ.

* ಕಾಲ ಪಕ್ಷಿಯು ಯುಗಯುಗದ ಕೆಟ್ಟದ್ದನ್ನು ಅಳಿಸಿ ಪರಿವರ್ತನೆಗೆ ಅವಕಾಶ ನೀಡಿದೆ. ತನ್ನ ರೆಕ್ಕೆಯನ್ನು ಬೀಸುತ್ತಾ ಎಲ್ಲರಲ್ಲೂ ಶಕ್ತಿ ತುಂಬಿ ಮುಂದಿನ ಮಕ್ಕಳಿಗೇ ಶುಭ ಹಾರೈಸಿದೆ.

* ಕಾಲಪಕ್ಷಿಯು ಶುಕ್ರ ಗ್ರಹದ ಗಡಿಯನ್ನು ಮೀರಿ; ಚಂದ್ರಲೋಕದ ನೀರನ್ನು ಹೀರಿ; ಆಟವಾಡಲು ಮಂಗಳ ಲೋಕದ ಅಂಗಳಕೇರಿದೆ ಎಂದು ಮಾನವನ ವೈಜ್ಞಾನಿಕ ಪ್ರಗತಿಯನ್ನು ತಿಳಿಸಿದ್ದಾರೆ.

* ಕಾಲ ಪಕ್ಷಿಯು ದಿಗ್ಧಂಡಲದ ಅಂಚಿನ ಆಚೆಗೆ ತನ್ನ ಕೊಕ್ಕನ್ನು ತೆರೆದುಕೊಂಡು ಈ ಜಗತ್ತಿನ ರಹಸ್ಯವನ್ನು ಛೇದಿಸಲು ಹೊಂಚು ಹಾಕುತ್ತಾ ಕಾಯುತ್ತಿದೆ ಎಂದಿದ್ದಾರೆ.

 

 

ಪದ್ಯ ಕಂಠ ಪಾಠ ಮಾಡಿರಿ

 

ನೀಲಮೇಘಮಂಡಲ-ಸಮ ಬಣ್ಣ

ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ

ಚಿಕ್ಕೆಯಮಾಲೆಯ ಸೆಕ್ಕಿಸಿಕೊಂಡು

ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ

ಹಕ್ಕಿ ಹಾರುತಿದೆ ನೋಡಿದಿರಾ?

 

ಅಥವಾ

 

ಯುಗ-ಯುಗಗಳ ಹಣೆ ಬರೆಹವ

ಒರಸಿ ಮನ್ವಂತರಗಳ ಭಾಗ್ಯವ ತೆರೆಸಿ

ರೆಕ್ಕೆಯ ಬೀಸುತ ಚೇತನಗೊಳಿಸಿ

ಹೊಸಗಾಲದ ಹಸು ಮಕ್ಕಳ ಹರಸಿ

ಹಕ್ಕಿ ಹಾರುತಿದೆ ನೋಡಿದಿರಾ?

 

 

 

 

 

ಪದ್ಯಪಾಠ-4 : ಛಲಮನೆ ಮೆರೆವೆಂ

*. ರನ್ನ ಕವಿಯ ಕಾಲ ಸಾ.ಶ 949(19ನೇಶತಮಾನ) ಇವನ ಸ್ಥಳ ಬಾಗಲಕೋಟೆ ಜಿಲ್ಲೆಯ ಮುಧೋಳ.

*. ಇವನು ಚಾಲುಕ್ಯ ದೊರೆಯಾದ ತೈಲಪನ ಆಸ್ಥಾನದಲ್ಲಿದ್ದನು.

..ಇವನು ಸಾಹಸ ಭೀಮ ವಿಜಯಂ, ಅಜಿತ ತೀರ್ಥಂಕರ ಪುರಾಣ ತಿಲಕಂ ಚಕ್ರೇಶ್ವರಚರಿತಂ ಕಾವ್ಯಗಳನ್ನು ರನ್ನಕಂದ ಎಂಬ ನಿಘಂಟನ್ನು ಬರೆದಿದ್ದಾನೆ.

*. ಇವನಿಗೆ ಕವಿಚರ್ಕವರ್ತಿ ಎಂಬ ಬಿರುದು ಇದೆ. ರತ್ನತ್ರಯರಲ್ಲಿ ಒಬ್ಬನು.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.

1. ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ ಎಂದು ದುರ್ಯೋಧನ ಯಾರಿಗೆ ಹೇಳುವನು?

ಉ: ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ ಎಂದು ದುರ್ಯೋಧನನು ಭೀಷ್ಮಾಚಾರ್ಯರಿಗೆ ಹೇಳಿದನು.

2. ?

3. ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ!!

ಉ: ಭೀಮ ಮತ್ತು ಅರ್ಜುನನನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ.

4. ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವರು ಯಾರು?

ಉ : ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವರು ದುರ್ಯೋಧನ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ತಾನು ಹೋರಾಡುತ್ತಿರುವುದು ನೆಲಕ್ಕಲ್ಲ ಛಲಕ್ಕೆ ಎಂಬುದನ್ನು ದುರ್ಯೋಧನ ಹೇಗೆ ವಿವರಿಸುತ್ತಾನೆ?

ಉ : ನಾನು ಭೂಮಿಗಾಗಿ ಹೋರಾಡುತ್ತಿಲ್ಲ ಆದರೆ ನನ್ನ ಭಲಕ್ಕಾಗಿ ಪಾಂಡವರೊಡನೆ ಹೋರಾಡುವೆನು.

* ಪ್ರೀತಿಯ ಗೆಳೆಯ ಕರ್ಣನನ್ನು, ಪ್ರೀತಿಯ ತಮ್ಮ ದುಶ್ಯಾಸನನ್ನು,

* ನೂರು ಮಂದಿ ಸಹೋದರರು ಮತ್ತು ನೂರು ಮಂದಿ ಮಕ್ಕಳನ್ನು ಕೊಲ್ಲಿಸಿದ ಈ ಭೂಮಿ ನನಗೆ ಪಾಳು ಭೂಮಿಗೆ ಸಮ.

ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇ? ಆದ್ದರಿಂದ ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ ಎಂದು ಹೇಳುತ್ತಾನೆ.

2. ಈ ನೆಲದೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನ ಹೇಳುವುದೇಕೆ?

ಉ:

* ನಾನು ಭೂಮಿಗಾಗಿ ಹೋರಾಡುತ್ತಿಲ್ಲ. ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು.

* ಈ ಭೂಮಿ ನನಗೆ ಪಾಳು ಭೂಮಿಗೆ ಸಮ.

* ಪ್ರಿಯ ಗೆಳೆಯನಾದ ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಸಹಬಾಳ್ವೆ ಮಾಡುವುದಿಲ್ಲ” ಎನ್ನುತ್ತಾನೆ.

3. ಪಾರ್ಥ-ಭೀಮರ ಬಗೆಗೆ ದುರ್ಯೋಧನನ ಅಭಿಪ್ರಾಯವೇನು?

ಉ: *. ನನ್ನ ಪ್ರೀತಿಯ ಗೆಳೆಯ ಕರ್ಣನನ್ನು, ನನ್ನ ಪ್ರೀತಿಯ ತಮ್ಮನಾದ ದುಶ್ಯಾಸನನನ್ನು ಕೊಂದ ಅರ್ಜುನ ಮತ್ತು ಭೀಮ ಬದುಕಿರುವವರೆಗೆ;

.. ನನ್ನ ದೇಹದಲ್ಲಿ ಪ್ರಾಣ ಇರುವವರೆಗೆ; ನಾನು ಸಂಧಿಮಾಡಿಕೊಳ್ಳಲು ಒಪ್ಪುವುದಿಲ್ಲ. ಮೊದಲು ಆ ಇಬ್ಬರನ್ನೂ ಕೊಲ್ಲುವೆನು.

*.ಅವರನ್ನು ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆ”ಎಂಬುದು ಪಾರ್ಥ-ಭೀಮರ ಬಗೆಗೆ ಮರ್ಯೋಧನನ ಅಭಿಪ್ರಾಯವಾಗಿದೆ.

ಇ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ನೆಲಕಿರಿವೆನೆಂದು ಬಗೆದಿರೆ ಚಲಕಿರಿವೆಂ”

2. “ಸಮರದೊಳೆನಗಜ್ಜ ಪೇಳೆಮಾವುದು ಕಜ್ಜಂ.”

3. “ಪಾಂಡವರೊಳಿರಿದು ಛಲಮನೆ ಮೆರೆವೆಂ.”

4. “ಮೇಣಾಯ್ತು ಕೌರವಂಗದನಿತಳಂ,”

ಆಯ್ಕೆ : ಈ ವಾಕ್ಯವನ್ನು ರನ್ನ ರಚಿಸಿರುವ ‘ಗದಾಯುದ್ಧ’ ಕೃತಿಯಿಂದ ಆಯ್ದ ‘ಛಲಮನೆ ಮೆರೆವೆಂ ಪದ್ಯದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ತಂದೆ- ತಾಯಿಯರ ಸಲಹೆಯಂತೆ ದುರ್ಯೋಧನ ಭೀಷ್ಮಚಾರ್ಯರ ಸಲಹೆ ಪಡೆಯಲು ಬಂದಾಗ ಅವರು ಪಾಂಡವರೊಡನೆ ಸಂಧಿಮಾಡಿಕೋ ಎಂದು ಸಲಹೆ ನೀಡುತ್ತಾರೆ. ಆದರೆ ಅದಕ್ಕೆ ಒಪ್ಪದ ದುರ್ಯೋಧನನು ಈ ಮಾತನ್ನು ಹೇಳುತ್ತಾನೆ.

ಸ್ವಾರಸ್ಯ: ದುರ್ಯೋಧನನ ಈ ಮಾತಿನಲ್ಲಿ ಛಲದಿಂದ ಬಾಳುವುದೇ ನಿಜವಾದ ಕ್ಷತ್ರಿಯನ ಗುಣ ಎಂಬುದು ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.

ఈ) ಮೌಲ್ಯವನ್ನು ಆಧರಿಸಿ ಭಾವಾರ್ಥ ಬರೆಯಿರಿ.

ಈ ವಾಕ್ಯವನ್ನು ರನ್ನ ಬರೆದಿರುವ ‘ಗದಾಯುದ್ಧ’ ಕೃತಿಯಿಂದ ಆರಿಸಿದ ‘ಭಲಮನೆ ಮೆಂ’ಎಂಬ ಪದ್ಯದಿಂದ ತೆಗೆದುಕೊಳ್ಳಲಾಗಿದೆ.

*

* ಮೌಲ್ಯ: ಭೀಷ್ಠರ ಬುದ್ದಿವಾದ ಹಾಗೂ ದುರ್ಯೋಧನನ ಛಲ, ದೃಢನಿರ್ಧಾರ ಮತ್ತು ಸ್ವಾಭಿಮಾನದ ಮಾತುಗಳು ಇಲ್ಲಿನ ಮೌಲ್ಯವಾಗಿದೆ.

 

ಉ) ಕೊಟ್ಟಿರುವ ಪ್ರಶ್ನೆಗಳ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ

1. ಭೀಷ್ಮ ಮತ್ತು ದುರ್ಯೋಧನರ ನಡುವಿನ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿ.

2. ದುರ್ಯೋಧನನ ಛಲದ ಗುಣ ಅವನ ಮಾತುಗಳಲ್ಲಿ ವ್ಯಕ್ತವಾಗಿರುವ ಬಗೆಯನ್ನು ವಿವರಿಸಿ.

ಉ: ದುರ್ಯೋಧನನು ಭೀಷ್ಮರ ಸಲಹೆ ಪಡೆಯಲು ರಣರಂಗಕ್ಕೆ ಬರುತ್ತಾನೆ.

* ಭೀಷ್ಮರು ಪಾಂಡವರನ್ನು ಒಪ್ಪಿಸುತ್ತೇನೆ. ಸಂಧಿ ಮಾಡಿಕೋ ಎಂದು ಹೇಳುತ್ತಾರೆ.

* ಆಗ ದುರ್ಯೋಧನನು ಅಜ್ಜಾ, ನಿಮಗೆ ನಮಸ್ಕರಿಸಿ ಹೋಗಲೆಂದು ಬಂದೆನೇ ಹೊರತು ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದಿಲ್ಲ.

* ಮುಂದೆ ನಡೆಯುವ ಯುದ್ಧದಲ್ಲಿ ನಾನೇನು ಮಾಡಬಹದು ಎಂಬುದನ್ನು ಹೇಳಿರಿ.

* ಈ ಭೂಮಿಗಾಗಿ ಯುದ್ಧ ಮಾಡುವುದಿಲ್ಲ ಭಲಕ್ಕಾಗಿ ಪಾಂಡವರೊಡನೆ ಹೋರಾಡುವೆನು.

* ಈ ಭೂಮಿ ನನಗೆ ಪಾಳುಬಿದ್ದ ನೆಲ ಕರ್ಣನನ್ನು ಕೊಲ್ಲಿಸಿದ ನೆಲನೊಡನೆ ಮತ್ತೆ ಬಾಳುವುದುಂಟೆ?

* ಗೆಳೆಯ ಕರ್ಣ, ನನ್ನ ತಮ್ಮ ದುಶ್ಯಾಸನರನ್ನು ಕೊಂದ ಆ ಪಾರ್ಥ-ಭೀಮರನ್ನು ಕೊಲ್ಲುವವರೆಗೆ ಸಂಧಿಗೆ ಒಪ್ಪುವುದಿಲ್ಲ.

* ನನ್ನ ಮಕ್ಕಳು, ಒಡ ಹುಟ್ಟಿದ ಸಹೋದರರು ಹೋರಾಡಿ ಸತ್ತರು.

* ಹಾಗಾಗಿ ನನ್ನಲ್ಲಿ ಕೋಪ ಹುಟ್ಟಿರುವದರಿಂದ ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ.

* ನಾನು ಹೋರಾಡದೆ ಬಿಡುವುದಿಲ್ಲ ಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು ಇಲ್ಲವೆ ನಾನು ಉಳಿಯಬೇಕು ಎಂದನು.

ಪಠ್ಯಪೂರಕ ಅಧ್ಯಯನ 01 : ವಸಂತ ಮುಖ ತೋರಲಿಲ್ಲ

ವಿಜಯಶ್ರೀ ಸಬರದ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.

1. ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ?

ಉ: ಪುಟ್ಟ ಪೋರಿ ಮುಸುರೆ ತಿಕ್ಕುತ್ತಿದ್ದಾಳೆ.

2. ಅಮ್ಮ ಎಲ್ಲಿ ಮಲಗಿದ್ದಾಳೆ?

ಉ: ಅಮ್ಮ ಗುಡಿಸಲಿನಲ್ಲಿ ಮಲಗಿದ್ದಾಳೆ.

3. ಯಾರಿಗೆ ವಸಂತ ಮುಖ ತೋರಲಿಲ್ಲ?

ಉ: ಕಮ್ಮಾರ, ಕುಂಬಾರ, ನೇಕಾರ, ಕೇರಿಯ ಮಾರನಿಗೆ ವಸಂತ ಮುಖ ತೋರಲಿಲ್ಲ.

4. ಗುಡಿಸಲೊಳಗೆ ಬರಲು ಹೆದರಿದವರು ಯಾರು?

ಉ: ಗುಡಿಸಲೊಳಗೆ ವಸಂತ ಬರಲು ಹೆದರಿದನು.

5. ಬಾಲರವಿ ಎಲ್ಲಿ ಸೊರಗಿದ್ದಾನೆ?

ಉ: ಬಾಲರವಿ ತೂತು ಬಿದ್ದ ಅಮ್ಮನ ಸೀರೆಯಲ್ಲಿ ಸೊರಗಿದ್ದಾನೆ.

ಆ] ಕೊಟ್ಟಿರುವ ಪ್ರಶ್ನೆಗಳಿಗೆ 2-3 ವಾಕ್ಯಗಳಲ್ಲಿ ಉತ್ತರಿಸಿ,

1. ‘ವಸಂತ ಮುಖ ತೋರಲಿಲ್ಲ’ ಪ್ರಕೃತಿಯ ಸಂಭ್ರಮ ಹೇಗೆ ವ್ಯಕ್ತವಾಗಿದೆ?

ಉ:ಹಸಿರು ತುಂಬಿ ನಿಂತ ಮಾವಿನ ಮರಗಳು, ರೆಕ್ಕೆ ಬಿಚ್ಚಿ ಹಾರುತ್ತಿರುವ ಹಕ್ಕಿಗಳು,

*. ಮನತುಂಬಿ ಹಾಡುವ ಕೋಗಿಲೆಗಳು, ಕಡಲುಕ್ಕಿ ಹರಿಯುವಂತಹ ಸಂಭ್ರದು ಈ ಕವನದಲ್ಲಿ ವ್ಯಕ್ತವಾಗಿದೆ.

2. ‘ವಸಂತ ಮುಖ ತೋರಲಿಲ್ಲ’ ಕದನದಲ್ಲಿ ಪುಟ್ಟಿಯ ಪ್ರಶ್ನೆಗಳೇನು ?

ಉ: ವಸಂತ ಮುಖ ತೋರಲಿಲ್ಲ ಪದ್ಯದಲ್ಲಿ ಗುಡಿಸಲೊಳಗೆ ಬರಲು ವಸಂತ ಹೆದರಿದನೆ?

* ಹರಿದ ಚಿಂದಿ ಬಟ್ಟೆಗಳ ಕಂಡು ಅವನು ಮರುಗಿದನೆ ? ಎಂಬುವು ಹುಟ್ಟಿಯ ಪ್ರಶ್ನೆಗಳಾಗಿವೆ.

3. ‘ವಸಂತ ಮುಖ ತೋರಲಿಲ್ಲ’ ಕವನದಲ್ಲಿ ಪುಟ್ಟಿ ಏಕೆ ಮೂಕ ವಿಸ್ಮಿತಳಾಗಿದ್ದಾಳೆ ?

ಉ: • ಒಡೆಯನ ವಾಗಿಲಲಿ ಬಳುಕುವ ಮಾವಿನೆಲೆಯ ತೋರಣ.

* ಮಲ್ಲಿಗೆ ಹೂವಲಿ ಬೀರುವ ಮುಗುಳು ನಗೆ.

* ಹೊಳೆದ ರಂಗೋಲಿಯಲಿ ಥಳಥಳಿಸುವ ಬಾಲರವಿಯ ಕಂಡು ಮೂಕ ವಿಸ್ಮಿತಳಾಗಿದ್ದಾಳೆ.

 

 

 

Leave a Comment