nammadenide poem in kannada
nammadenide question answer
nammadenide poem summary in kannada
nammadenide poem
nammadenide
nammadenide song
nammadenide 6th poem
nammadenide poem saramsha in kannada
nammadenide saramsha
nammadenide notes in kannada
ನಮ್ಮದೇನಿದೆ ಪದ್ಯ 6ನೇ ತರಗತಿ
ನಮ್ಮದೇನಿದೆ ಪದ್ಯದ ಪ್ರಶ್ನೆ ಉತ್ತರ
ನಮ್ಮದೇನಿದೆ ಪದ್ಯ
ನಮ್ಮದೇನಿದೆ ಪದ್ಯದ ಸಾರಾಂಶ
ನಮ್ಮದೇನಿದೆ ಪದ್ಯ ರಾಗ
ನಮ್ಮದೇನಿದೆ ಪದ್ಯ ಹಾಡು
ನಮ್ಮದೇನಿದೆ ಪದ್ಯ 6ನೇ ತರಗತಿ ಪ್ರಶೋತ್ತರ
ನಮ್ಮದೇನಿದೆ ಪದ್ಯ 6ನೇ ತರಗತಿ ಸಾರಾಂಶ
ನಮ್ಮದೇನಿದೆ ಪದ್ಯದ ಪ್ರಶ್ನೆ ಉತ್ತರಗಳು
ನಮ್ಮದೇನಿದೆ ಆರನೇ ತರಗತಿ
ಅ.ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
೧. ಮರವು ಮನುಷ್ಯನಿಗೆ ಏನೇನು ಕೊಡುತ್ತದೆ ?
ಉತ್ತರ:-
ಮರವು ಮನುಷ್ಯನಿಗೆ ಹಣ್ಣು, ಹೂವು ,ಸೊಪ್ಪು, ಸೌದೆ, ಬಿಸಿಲಿಗೆ ನೆರಳು, ಕೊಡುತ್ತದೆ.
೨. ಹಸುವಿನಿಂದ ಮನುಷ್ಯನು ಪಡೆಯುವ ಪ್ರಯೋಜನಗಳು ಯಾವುವು?
ಉತ್ತರ:-
ಹಸುವಿನಿಂದ ಮನುಷ್ಯನು ಹಾಲು, ಮೊಸರು, ಬೆಣ್ಣೆ, ಗೊಬ್ಬರವನ್ನು ಪಡೆಯುತ್ತಾನೆ.
೩. ಗಿಡ ಬಳ್ಳಿಗಳು ಏನನ್ನು ಕೊಡುತ್ತವೆ?
ಉತ್ತರ:-
ಗಿಡ ಬಳ್ಳಿಗಳು ಹೂವನ್ನು ಕೊಡುತ್ತವೆ.
೪. ಪ್ರಕೃತಿಯಲ್ಲಿ ನಾನು ನನ್ನದು ಎಂಬ ಮಾತಿಲ್ಲದೆ ಉಪಕರಿಸುತ್ತಿರುವವರು ಯಾರು?
ಉತ್ತರ:-
ಪ್ರಾಣಿ, ಪಕ್ಷಿ ,ಸಸ್ಯವರ್ಗ, ನದಿ, ಬಾನು ,ಕಾಡು, ಭೂಮಿ, ಸೂರ್ಯ, ಚಂದ್ರ ಇವೆಲ್ಲ ಪ್ರಕೃತಿಯಲ್ಲಿ ನಾನು ನನ್ನದು ಎಂಬ ಮಾತಿಲ್ಲದೆ ಉಪಕರಿಸುತ್ತಿವೆ.
ಆ. ಸ್ವಂತ ವಾಕ್ಯದಲ್ಲಿ ಬಳಸಿರಿ
೧. ತ್ಯಾಗ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು.
೨. ಪೊರೆ ಮರ-ಗಿಡಗಳು ಹಲವಾರು ಕೀಟ ಪಕ್ಷಿಗಳಿಗೆ ಪೊರೆಯುತ್ತವೆ.
೩. ದಾನ ದಾನಗಳಲ್ಲಿ ಶ್ರೇಷ್ಠದಾನ ಅನ್ನದಾನ.
೪. ಕೋಟೆ ಚಿತ್ರದುರ್ಗದಲ್ಲಿ ಏಳು ಸುತ್ತಿನ ಕೋಟೆ ಇದೆ.
ಇ. ಈ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ
ಉತ್ತರ:-
ಶ್ರೀಮತಿ ನಿರ್ಮಲ ಸುರತ್ಕಲ್ ರವರು ಬರೆದಿರುವ ನಮ್ಮದೇನಿದೆ? ಪದ್ಯವು ಮನುಷ್ಯನು ಸಕಲ ಜೀವರಾಶಿಗಳ ಜೊತೆ ಹೊಂದಿಕೊಂಡು ಬಾಳಬೇಕೆಂಬ ಆಶಯವನ್ನು ಹೊಂದಿದೆ. ಹಣ್ಣು, ಹೂವು ,ಸೊಪ್ಪು, ಸೌದೆ, ನೆರಳು ಕೊಡುವ ಮರವು ಇವೆಲ್ಲವೂ ನನ್ನದು ಎಂದು ಒಮ್ಮೆಯಾದರೂ ಹೇಳುವುದಿಲ್ಲ. ಹಾಲು, ಮೊಸರು, ಬೆಣ್ಣೆ, ಗೊಬ್ಬರ ಕೊಡುವ ಹಸುವು ಇವೆಲ್ಲವೂ ನನ್ನದು ಎಂದು ಒಮ್ಮೆಯಾದರೂ ಹೇಳುವುದಿಲ್ಲ. ಹಾಗೆಯೇ ಮಳೆ ಕೊಡುವ ಮೋಡ, ಬಿಸಿಲು ಕೊಡುವ ಸೂರ್ಯ, ತಂಪು ಸುರಿಯುವ ಚಂದ್ರ ,ನೀರು ಕೊಡುವ ನದಿ, ಬಾವಿ ,ಹೂವು ಕೊಡುವ ಗಿಡ ಬಳ್ಳಿ ,ಹೊತ್ತು ಪೊರೆವ ಭೂಮಿ ತಾಯಿ ಯಾರೂ ಕೂಡ ಇವೆಲ್ಲವೂ ನನ್ನದು ನಾನು ಅನ್ನುವುದಿಲ್ಲ. ಆದರೆ ಮನುಷ್ಯ ಎಲ್ಲಾ ಸಂಪತ್ತು ನನ್ನದು, ಸಕಲ ಜೀವರಾಶಿಯು ನನಗಾಗಿ ಇದೆ ಎಂಬ ಭಾವನೆ ಬೆಳೆಸಿಕೊಂಡಿದ್ದಾನೆ. ಸ್ವಾರ್ಥ ನೆಲೆಗೊಂಡು, ಐಹಿಕ ಸುಖ ಸಂಪತ್ತುಗಳನ್ನು ಸಂಗ್ರಹಿಸುವುದೇ ಮನುಷ್ಯನ ಗುರಿಯಾಗಿದೆ. ಆದರೆ ಉಳಿದೆಲ್ಲ ಜೀವಿಗಳು ಸಂಪತ್ತಿನ ಕ್ರೋಢೀಕರಣ ಮಾಡದೆ ಸರಳವಾಗಿ ಬದುಕುತ್ತಿವೆ. ಹಾಗಾಗಿ ಮನುಷ್ಯನು ನಾನು, ನನ್ನದು ಎನ್ನುವುದನ್ನು ಬಿಟ್ಟು ಎಲ್ಲರಿಂದ ನಾವು ,ಎಲ್ಲಾ ಇದ್ದರೆ ನಾವು ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಈ ಕವಿತೆಯಲ್ಲಿ ಕವಿ ಹೇಳುತ್ತಿದ್ದಾರೆ.
ಈ. ಕೆಳಗಿನ ಪದ್ಯ ಭಾಗವನ್ನು ಪೂರ್ಣಗೊಳಿಸಿರಿ
ನೀರು ಕೊಡುವ ನದಿ, ಬಾವಿ
ಹೂವು ಕೊಡುವ ಗಿಡ, ಬಳ್ಳಿ
ಹೊತ್ತು ಪೊರೆವ ಭೂಮಿತಾಯಿ
“ನನ್ನದು”, “ನನ್ನದು” ಅನ್ನಲಿಲ್ಲ ಒಮ್ಮೆಯಾದರೂ!
ಎಲ್ಲರಿಂದ ನಾವು ತಾನೇ?
ಎಲ್ಲ ಇದ್ರೆ ನಾವು ತಾನೇ?
ನಮ್ಮದೇನು, ಹೇಳು ನೀನೇ
ಕೋಟೆ ಕಟ್ಟಿ ನಮ್ಮದೆನುವ ಭ್ರಮೆ ಮಾತ್ರವೇ!
೫. ಯಾವುದನ್ನು ಕವಿ ಮನುಷ್ಯನ ಭ್ರಮೆ ಎನ್ನುತ್ತಾರೆ?