ಪ್ರಜಾ ನಿಷ್ಠೆ ನೋಟ್ಸ್ ಈ ಬ್ಲಾಕ್ ಪೋಸ್ಟ್ ನಲ್ಲಿ ನಿಮಗೆ ಲಭ್ಯವಿದೆ.
ಪ್ರಜಾನಿಷ್ಠೆ ಪಾಠ ನಿಮ್ಮ ತರಗತಿಯಲ್ಲಿ ಹಾಗಿದ್ದರೆ ಅದರ ನೋಟ್ಸ್ ಅನ್ನು ಇಲ್ಲಿ ನೀವು ಹುಡುಕಬಹುದು , ಪ್ರಜಾನಿಷ್ಠೆ ಅರ್ಥ ಜೊತೆಗೆ ಕೃತಿಕಾರರ ಪರಿಚಯವಿದೆ,ಪ್ರಜಾನಿಷ್ಠೆ ಪ್ರಶ್ನೋತ್ತರಗಳು ಪಿಡಿಎಫ್ ರೂಪದಲ್ಲಿ ಬೇಕಾದಲ್ಲಿ ಕೆಳಗಡೆಗೆ ಸ್ಕ್ರೋಲ್ ಮಾಡಿ,
ಪ್ರಜಾನಿಷ್ಠೆ (ಗದ್ಯ-5) ಪಾಠ ಮುಗಿದ ಮೇಲೆ ನೋಟ್ಸ್ ಮಾಡುವುದು ನಿಮ್ಮ ಆದ್ಯ ಕರ್ತವ್ಯ,
ಪ್ರಜಾನಿಷ್ಠೆ ಕೊಶನ್ ಆನ್ಸರ್ ಓದಿಕೊಳ್ಳಲು ಕೂಡ ನೋಟ್ಸ್ ಅಗತ್ಯ,
ಪ್ರಜಾನಿಷ್ಠೆ ಕನ್ನಡ ನೋಟ್ಸ್,ಪ್ರಜಾನಿಷ್ಠೆ notes
ಪ್ರಜಾನಿಷ್ಠೆ ಪ್ರಶ್ನೋತ್ತರಗಳು
ಪ್ರಜಾನಿಷ್ಠೆ ಪ್ರಶ್ನೋತ್ತರಗಳು
ಕೃತಿಕಾರರ ಪರಿಚಯ
ಸಾ . ಶಿ .ಮರುಳಯ್ಯ : ಶ್ರೀ ಸಾಸಲು ಶಿವರುದ್ರಯ್ಯ ಮರುಳಯ್ಯ ಇವರು ಕ್ರಿ.ಶ. 1931 ರಲ್ಲಿ ತುಮಕೂರುಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶಿವರುದ್ರಯ್ಯ , ತಾಯಿ ಸಿದ್ದಮ್ಮ , ಇವರು ಕ್ರಿಶ 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ . ಎ . ಪದವಿಯನ್ನು ಮತ್ತು ಕ್ರಿ ಶ 1971 ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ‘ ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ ‘ ಕುರಿತ ಮಹಾಪ್ರಬಂಧಕ್ಕೆ ಪಿಎಚ್.ಡಿ . ಪದವಿಯನ್ನು ಪಡೆದರು .ಕ್ರಿ . ಶ . 1999 ರಿಂದ 1998 ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು . ರಾಜ್ಯಭಾಷಾ ಆಯೋಗದ ಸದಸ್ಯರಾಗಿಯೂ ಸೇವೆಯನ್ನು ಸಲ್ಲಿಸಿದರು .ಇವರು ಶಿವತಾಂಡವ , ಕೆಂಗನಕಲ್ಲು , ವಚನ ವೈಭವ , ನೆಲದ ಸೊಗಡು , ನಾಟ್ಯ ಮಯೂರಿ ,ವಿಜಯ ವಾತಾಪಿ ಮೊದಲಾದ ೨೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ .ಶ್ರೀಯುತರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ದೇವರಾಜ್ ಬಹದ್ದೂರ್ ಪ್ರಶಸ್ತಿಗ್ಗಳನ್ನು ನೀಡಿ ಗೌರವಿಸಲಾಗಿದೆ . ಇವರು ದಿನಾಂಕ 5-12-2016 ರಂದು ವಿಧಿವಶರಾದರು .ಪ್ರಸ್ತುತ ‘ ಪ್ರಜಾನಿಷ್ಠೆ ‘ ಗದ್ಯಪಾಠವನ್ನು ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದು ನಿಗದಿಪಡಿಸಿದೆ.
ಆಶಯ ಭಾವ
ಹೊಯ್ಸಳ ವಂಶದ ಪ್ರಸಿದ್ಧ ದೊರೆ ವಿಷ್ಣುವರ್ಧನ , ಆತನ ಮಹಾರಾಣಿ ಶಾಂತಲಾದೇವಿ . ಪ್ರಜಾಪ್ರೇಮಿಯಾಗಿದ್ದ ಈಕೆಯು ಒಮ್ಮೆ ಮಾರುವೇಷದಲ್ಲಿ ರಾಜ್ಯ ಸಂಚಾರ ಮಾಡುತ್ತಿದ್ದಳು .
ಆ ಸಮಯದಲ್ಲಿ ಪ್ರಜೆಗಳ ಪಾಮಾಣಿಕತೆಯನ್ನು ಕಂಡಳು . ಭೂಮಿಯಲ್ಲಿ ದೊರಕಿದ ಸಂಪತ್ತು ಪ್ರಜೆಗಳಿಗೆ ಸೇರಿದ್ದಾದ್ದರಿಂದ ಅದನ್ನು ಪ್ರಜೆಗಳಿಗಾಗಿಯೇ ಬಳಸಬೇಕು ಎಂಬ ಅಭಿಪ್ರಾಯದಂತೆ ದೇವಾಲಯ ನಿರ್ಮಾಣಕ್ಕೆ ಆ ಸಂಪತ್ತನ್ನು ಬಳಸಲು ಮಾಡಿದ ತೀರ್ಮಾನವನ್ನು ಈ ಪ್ರಜಾನಿಷ್ಠೆ ಎಂಬ ಪಾಠದಲ್ಲಿ ಕಾಣಬಹುದಾಗಿದೆ .
ಪದಗಳ ಅರ್ಥ
ಕಿಸುರು = ಕೆಂಪು ಬಣ್ಣ
ಕೊಪ್ಪರಿಗೆ – ಅಗಲವಾದ ಬಾಯಿಯುಳ್ಳ ಲೋಹದ ಪಾತ್ರೆ
ಗಾವುಂಡ = ಗ್ರಾಮದ ಮುಖ್ಯಸ್ಥ
ಚೈತ್ರಯಾತ್ರೆ – ವಿಜಯಯಾತ್ರೆ
ದೈವದವರು – ಊರಿನ ಹಿರಿಯರು , ಕುಲದ ಹಿರಿಯರು .
ಪ್ರವರ್ಧಮಾನ – ಅಭಿವೃದ್ಧಿ ಹೊಂದುವುದು ,
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1 , ಚೋಳರು ಮತ್ತು ಹೊಯ್ಸಳರ ನಡುವೆ ಎಲ್ಲಿ ಯುದ್ಧ ನಡೆಯಿತು ?
ಉತ್ತರ : ಚೋಳರು ಮತ್ತು ಹೊಯ್ಸಳರ ನಡುವೆ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆಯಿತು.
2. ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು ಯಾರು ?
ಉತ್ತರ : ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು ರಾಣಿ ಶಾಂತಲಾದೇವಿ.
3 , ಬನದಮ್ಮನ ಹಳ್ಳಿಯ ಜನರು ಎಲ್ಲಿ ಪಂಚಾಯಿತಿ ಸೇರಿದ್ದರು ?
ಉತ್ತರ : ಬನದಮ್ಮನ ಹಳ್ಳಿಯ ಜನರು ಬನಶಂಕರಿಯ ದೇವಾಲಯದ ಮುಂಭಾಗದ ಕಟ್ಟೆಯ ಮೇಲೆ ಪಂಚಾಯಿತಿ ಸೇರಿದ್ದರು.
4. ಬನದಮ್ಮನಹಳ್ಳಿಯ ಪಂಚಾಯಿತಿಯಲ್ಲಿ ಯಾರ್ಯಾರ ನಡುವಿನ ನ್ಯಾಯ ತೀರ್ಮಾನವಾಗುತ್ತಿತ್ತು ?
ಉತ್ತರ : ಬನದಮ್ಮನಹಳ್ಳಿಯ ಪಂಚಾಯಿತಿಯಲ್ಲಿ ಈರಣ್ಣ ಮತ್ತು ಬೀರಣ್ಣನ ನಡುವೆ – ನ್ಯಾಯ ತೀರ್ಮಾನವಾಗುತ್ತಿತ್ತು .
ಅ ) ಕೊಟ್ಟಿರುವ ಪ್ರಶ್ನೆಗಳಿಗೆ 3-4 ವಾಕ್ಯದಲ್ಲಿ ಉತ್ತರಿಸಿ .
1, ಹಲವರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ದೊರೆ ವಿಷ್ಣುವರ್ಧನನು ಏನೆಂದು ಹೇಳಿದನು ?
ಉತ್ತರ
ಹಲವರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ದೊರೆ ವಿಷ್ಣುವರ್ಧನನು ಸುಲಭವಾಗಿ ಸುಲಭವಾಗಿ ತಲಕಾಡನ್ನು ವಶಪಡಿಸಿಕೊಂಡನು. ಸಮಸ್ತ ಸೇನೆಯು ‘ ತಲಕಾಡುಗೊಂಡನಿಗೆ ಜಯವಾಗಲಿ ‘ ಎಂದು ಜೈಕಾರ ಹಾಕಿತು , ಹಲವರು ತಲಕಾಡು ನಗರವನ್ನು ಲೂಟಿ ಮಾಡಬೇಕೆಂದು ಇಚ್ಚಿಸಿದರು . ಆಗ ವಿಷ್ಣುವರ್ಧನನು “ ಕೆಚ್ಚೆದೆಯ ಕಟ್ಟಾಳುಗಳೇ , ಇದು ನಮ್ಮ ವಿಜಯದ ದಿನವೆಂದು ತಿಳಿದು ಮೈಮರೆಯಬಾರದು .
ಇದು ನಮ್ಮ ಸತ್ಯ ಪರೀಕ್ಷೆಯ ಸಮಯವೂ ಹೌದು . ಆದ್ದರಿಂದ ಎಷ್ಟೇ ಸ್ಥಾನಮಾನ ಪದವಿ ಪ್ರಶಸ್ತಿಗಳು ಲಭಿಸಲಿ , ಮಾನವ ತನ್ನ ಮಾನವೀಯ ಗುಣಗಳನ್ನು ಮಾತ್ರ ಗಾಳಿಯಲ್ಲಿ ತೂರಿಬಿಡಬಾರದು . ಸೆರೆ ಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮ ಅಲ್ಲ ; ಸೋತ ಸಾಮ್ರಾಜ್ಯವನ್ನು ಲೂಟಿ ಮಾಡುವುದು ಯುದ್ಧ ಧರ್ಮವಲ್ಲ . ಆ ಕಾರಣ ನೀವೆಲ್ಲರೂ ತಲಕಾಡಿನವರನ್ನು ತಮ್ಮವರೆಂದೇ * ಮನೋಭೀತಿಯನ್ನು ದೂರ ಮಾಡಿ ಶಾಂತಿ ಸ್ಥಾಪನೆ ಮಾಡಿ , ನಾಲ್ಕು ದಿನಗಳಾದ ಮೇಲೆ ರಾಜಧಾನಿಗೆ ಹಿಂದಿರುಗೋಣ , ” ಎಂದು ಹೇಳಿದರು .
2. ತಲಕಾಡಿನ ಊಟಿಯ ವಿಚಾರದಲ್ಲಿ ವಿಷ್ಣುವರ್ಧನನ ನಿಲುವೇನು ?
ಉತ್ತರ : ಚೋಳರು ಮತ್ತು ಹೊಯ್ಸಳರ ನಡುವೆ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆಯಿತು . ಈ ಈ ಯುದ್ಧದಲ್ಲಿ ಆದಿಯಮನು ಮಡಿದು , ತಲಕಾಡು ವಿಷ್ಣುವರ್ಧನನ ಕೈ ವಶವಾಯಿತು . ಅನೇಕರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ವಿಷ್ಣುವರ್ಧನನು ಅದಕ್ಕೆ ಅವಕಾಶ ಕೊಡಲಿಲ್ಲ . “ ಸೆರೆ ಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮವಲ್ಲ . ಸೋತ ಸಾಮ್ರಾಜ್ಯವನ್ನು ಲೂಟಿ ಮಾಡುವುದು . ಯದ್ಧ ಧರ್ಮವಲ್ಲ . ಆದ್ದರಿಂದ ತಲಕಾಡಿನ ಜನ ತಮ್ಮವರೆಂದೇ ತಿಳಿದು ನಡೆದುಕೊಳ್ಳಿ , ಅವರ ಮನೋಭೀತಿಯನ್ನು ದೂರ ಮಾಡಿ ಶಾಂತಿ ಸ್ಥಾಪನೆ ಮಾಡಿ ” ಎಂದು ವಿಷ್ಣವರ್ಧನನು ತನ್ನ ಸೈನಿಕರಿಗೆ ಹೇಳಿದನು
3 , ಬನದಮ್ಮನ ಹಳ್ಳಿಯ ದೇವಾಲಯದ ಮುಂದೆ ಯಾವ ವಿಚಾರವಾಗಿ ಚರ್ಚೆ ನಡೆದಿತ್ತು ?
ಉತ್ತರ : ಬನಶಂಕರಿಯ ದೇವಾಲಯದ ಮುಂಭಾಗದ ಕಟ್ಟೆಯ ಮೇಲೆ ನೂರಾರು ಜನರು ಒಂದು ಪಂಚಾಯಿತಿ ಸೇರಿದ್ದರು . ಬೀರಣ್ಣ ತನ್ನ ಮೂಡಲ ದಿಕ್ಕಿನಲ್ಲಿರುವ ಹಳ್ಳಿ ಹೊಲವನ್ನು ಈರಣ್ಣನಿಗೆ ನೂರಾ ಎಂಟು ಹೊನ್ನಿಗೆ ಕೊಟ್ಟಿದ್ದ ಎರಡು ವರ್ಷಗಳ – ಹೊಲದಲ್ಲಿ ಉಳುಮೆ ಮಾಡೋವಾಗ ನಿನ್ನೆ ದಿನಾ ಒಂದು ಕೊಪ್ಪರಿಗೆ ಬಂಗಾರ ಸಿಗುತ್ತದೆ . ಇದನ್ನು ಈರಣ್ಣ ಪೂಜೆ ಮಾಡಿ ಬೀರಣ್ಣನ ಮನೆಗೆ ತೆಗೆದುಕೊಂಡು ಹೋಗಿ , ‘ ತೆಗೆದುಕೊಳ್ಳಷ್ಟ ಇದು ನೀನು ಕೊಟ್ಟ ಹೊಲದಾಗೆ ಸಿಕ್ಕಿತು … ಯಾರೋ ನಿನ್ನ ಹೂರ್ವಿಕರು ನಿನಗಾಗಿ ಇಟ್ಟುದು ಅಂತಾ ಕಾಣಿಸುತ್ತದೆ ‘ ಎಂದು ಹೇಳಿದನು . ಆದರೆ ಹೊಲ ಮಾರಿದ ಮೇಲೆ ಆ ನೆಲದ ಹಕ್ಕು ತನಗಿಲ್ಲ ಎಂದು ಬೀರಣ್ಣ ವಾದಿಸಿದನು . ಹೀಗೆ ಬೀರಣ್ಣ ಕೊಪ್ಪರಿಗೆಯ ಬಂಗಾರ ನನಗೆ ಬೇಡ ಎಂದು . ಈರಣ್ಣನೂ ಸಹ ನನಗೂ ಬೇಡ ಎಂದಾಗ ಈ ವಿಚಾರವಾಗಿ ಚರ್ಚೆ ನಡೆದಿತ್ತು .
4. ದೈವದವರ ತೀರ್ಪಿನ ಬಗೆಗೆ ಶಾಂತಲೆಯ ಅಭಿಪ್ರಾಯವೇನು ?
ಉತ್ತರ : ಈರಣ್ಣ ಮತ್ತು ಬೀರಣ್ಣ ಇಬ್ಬರೂ ಕೊಪ್ಪರಿಗೆ ಬಂಗಾರವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಒಪ್ಪದಿದ್ದಾಗ ಗ್ರಾಮದ ಮುಖ್ಯಸ್ಥ ಕೇತುಮಲ್ಲ ‘ ಇಬ್ಬರಿಗೂ ಬೇಡವಾದ ಹಣ ರಾಜ್ಯದ ಬೊಕ್ಕಸ ಸೇರಲಿ ‘ ಎಂದನು . ನ್ಯಾಯ ತೀರ್ಮಾನ ಮಾಡುತ್ತಾನೆ. ಕೂಡಲೆ ಮರದ ಮರೆಯಲ್ಲಿದ್ದ ಶಾಂತಲೆ ಮುಂದೆ ಬಂದು , “ ಕೂಡದು … ಕೂಡದು …ಎಂದು ಕೂಗಿದಳು . ಬೊಕ್ಕಸಕ್ಕೆ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ … ಅವರ ಬೆವರಿನ ಫಲ ಅಲ್ಲ … ಅದು ಪ್ರಜೆಗಳ ಬೆವರಿನ ಫಲ ” ಆದ್ದರಿಂದ ಅದು ನಿಮ್ಮ ಊರಿನ ಹಣ ನಿಮೂರಿನ ಏಳಿಗೆಗಾಗಿಯೇ ವಿನಿಯೋಗವಾಗಲಿ . ” ಎಂದು ಅಭಿಪ್ರಾಯ ಪಟ್ಟಳು
5 , ಶಾಂತಲೆಯು ನೀಡಿದ ತೀರ್ಪೇನು ?
ಉತ್ತರ : ಕೊಪ್ಪರಿಗೆ ಹಣವು ರಾಜ್ಯದ ಬೊಕ್ಕಸಕ್ಕೆ ಸೇರಬೇಕೆಂದು ಕೇತುಮಲ್ಲ ತೀರ್ಪನ್ನು ನೀಡಿದಾಗ ಶಾಂತಲೆ “ ಅಣ್ಣಂದಿರಾ , ತಾಯಂದಿರೆ , ಇದೋ ಈ ಹೊನ್ನನ್ನು ನೇರವಾಗಿ ನಾನು ರಾಜ್ಯದ ಕೋಶಕ್ಕೆ ಸೇರಿಸುವುದಿಲ್ಲ … ಇದು ದೈವದ ದುಡ್ಡು , ದೇವಕಾರ್ಯಕ್ಕೆ ವಿನಿಯೋಗವಾಗಬೇಕಾದ್ದು ಧರ್ಮ … ಕೇಳಿ , ನನಗೆ ಬಹಳ ದಿನಗಳಿಂದಲೂ ಒಂದು ಆಸೆ ಇದೆ … ನಮ್ಮ ಹಿಂದೆ , ಕ್ರಯಕ್ಕೆ ತಕ್ಕೊಂಡು : ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾಗಿ ಒಂದು ಕಲಾದೇಗುಲವನ್ನು ರಾಜಧಾನಿ ದ್ವಾರಸಮುದ್ರದಲ್ಲಿ ನಿರ್ಮಿಸಬೇಕು ಎಂದು . ಅವಳ ದೇಗುಲಗಳ ಶಿಲ್ಪಕಲೆ ಹೊಯ್ಸಳರ ಶೈಲಿಗೆ ಮಾದರಿಯಾಗಿರಬೇಕು … ವೇಲಾಪುರಿಯ ಚೆನ್ನಕೇಶವ ದೇವಾಲಯಕ್ಕಾಗಿ ಈ ಹೊನ್ನು ವಿನಿಯೋಗವಾಗಲಿ..ಎಂದು ಶಾಂತಲೆ ತೀರ್ಪು ನೀಡಿದಳು .
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ
1 , ಚೋಳ ದೊರೆ ಕುಲೋತ್ತುಂಗನು ಹೊಯ್ಸಳ ಸಾಮ್ರಾಜ್ಯದ ಮೇಲೆ ಯುದ್ಧ ಸಾರಲು ಇದ್ದ ಕಾರಣ ಹಾಗೂ ಪರಿಣಾಮವನ್ನು ವಿವರಿಸಿ,
ಉತ್ತರ : ಹೊಯ್ಸಳ ಸಾಮ್ರಾಜ್ಯದ ಪ್ರಗತಿಯನ್ನು ಕಂಡ ಪರರಾಜರ ಕಣ್ಣುಗಳು ಕೆಂಪಾದವು , ಅದರಲ್ಲೂ ದಿನೇ ದಿನೇ ಪ್ರವರ್ಧಮಾನಕ್ಕೆ ಬರುತ್ತಿರುವ ವಿಷ್ಣುವರ್ಧನ ಭೂಪಾಲನನ್ನು ಬಡಿಯಬೇಕೆಂದು ಶತ್ರು ರಾಜರುಗಳು ಕಾಯುತ್ತಿದ್ದರು .
ಅವರಲ್ಲಿ ಚೋಳಮಂಡಲದ ಕುಲೋತ್ತುಂಗನು ಪ್ರಮುಖನಾದವನು . ಗಂಗರ ತಲಕಾಡು ಅವನ ಸ್ವಾಧೀನದಲ್ಲಿತ್ತು. ಕುಲೋತ್ತುಂಗ ಪ್ರಚಂಡ ಆಶಾವಾದಿ . ಅಖಂಡ ಭರತಖಂಡದ ಒಡೆತನವನ್ನು ಬಯಸುತ್ತಿದ್ದ ದುರಾತಾಪಿಶಾಚಿಯಾಗಿದ್ದನು .
ಹೊಯ್ಸಳ ಸಾಮ್ರಾಜ್ಯವನ್ನು ತನ್ನ ವಶ ಮಾಡಿಕೊಳ್ಳಲೆಂದು ಆಶಿಸಿ , ಹೊಯ್ಸಳ ಸಾಮ್ರಾಜ್ಯದ ಮೇಲೆ ಯುದ್ಧ ಸಾರಿದನು , ಚೋಳರಿಗೂ ಮತ್ತು ಹೊಯ್ಸಳರಿಗೂ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆದು ; ಹೊಯ್ಸಳರ ಕೈ ಮೇಲಾಗಿ ಚೋಳಸೇನೆ ಕಂಗಾಲಾಯಿತು ,
ಆದಿಯಮ ಯುದ್ಧದಲ್ಲಿ ಮಡಿದ . ಅವನ ಸತ್ತ ಸುದ್ದಿ ತಿಳಿಯುತ್ತಲೆ ಚೋಳಸೇನೆ ದಿಕ್ಕಾಪಾಲಾಗಿ ಓಡಿತು . ತಲಕಾಡ ಕೋಟೆ ಸುಲಭವಾಗಿ ವಿಷ್ಣುವರ್ಧನ ಭೂಪಾಲನ ಕೈವಶವಾಯಿತು . ಸಮಸ್ತ ಸೇನೆಯು “ ತಲಕಾಡುಗೊಂಡನಿಗೆ ಜಯವಾಗಲಿ ‘ ಎಂದು ಜೈಕಾರ ಹಾಕಿತು .
2 , ಬನದಮ್ಮನ ಹಳ್ಳಿಯ ಪಂಚಾಯಿತಿಯಲ್ಲಿ ನಡೆದ ನ್ಯಾಯ ಹಾಗೂ ಅದರ ತೀರ್ಪಿನ ಬಗ್ಗೆ ವಿವರಿಸಿ
ಉತ್ತರ : ವಿಷ್ಣುವರ್ಧನ ಭೂಪಾಲನು ರಾಜ್ಯದಲ್ಲಿ ಇಲ್ಲದಿದ್ದಾಗ ರಾಜಧಾನಿಯಲ್ಲಿ ಸಂರಕ್ಷಕಳಾಗಿ ನಿಂತಿದ್ದ ದೇವತೆ ಎಂದರೆ ಮಹಾರಾಣಿ ಶಾಂತಲಾದೇವಿ . ಗಂಡುಡೆಯನ್ನುಟ್ಟು ಯುವರಾಜ ಕುಮಾರ ಉದಯಾದಿತ್ಯನನ್ನು ಜೊತೆಯಲ್ಲಿ ಕರೆದುಕೊಂಡು ರಾಜ್ಯ ಸಂಚಾರ ಮಾಡಲು ಹೊರಟಳು . ಬನದಮ್ಮನಳ್ಳಿಯ ಬನಶಂಕರಿಯ ದೇವಾಲಯದ ಮುಂಭಾಗದ ಕಟ್ಟೆಯ ಮೇಲೆ ನೂರಾರು ಜನರು ಒಂದು ಪಂಚಾಯಿತಿ ನೆರೆದಿದ್ದುದು ಕಾರಣ ಬೀರಣ್ಣ ಎಂಬುವವನು ತನ್ನ ಹೊಲವನ್ನು ಈರಣ್ಣನಿಗೆ ಮಾರಾಟ ಮಾರಣ್ಣ ಈರಣ್ಣ ಹೊಲವನ್ನು ಉಳುಮೆ ಮಾಡುತ್ತಿರುವಾಗ ಅವನಿಗೆ ಒಂದು ಕೊಪ್ಪರಿಗೆ ಬಂಗಾರ ದೊರೆಯಿತು ,
ಅದನ್ನು ಈರಣ್ಣ ಬಳಿ ಇಟ್ಟುಕೊಳ್ಳಲಿಲ್ಲ . ಈ ವಿಚಾರವಾಗಿ ಪಂಚಾಯಿತಿಯಲ್ಲಿ ಚರ್ಚೆ ನಡೆದ ಮೇಲೆ ಅಧ್ಯಕ್ಷ ಕೇತುಮಲ್ಲ ನಾಯಕ ‘ ಈ ಹೊನ್ನು ರಾಜ್ಯದ ಬೊಕ್ಕಸ ಸೇರಲಿ ‘ ಎಂದು ಹೇಳಿದ . ಜನರೆಲ್ಲರೂ ಒಪ್ಪಿದರು . ಆದರೆ ಮಾರುವೇಷದಲ್ಲಿದ್ದ ಶಾಂತಲಾ “ ಈ ಕೊಪ್ಪರಿಗೆಯ ಬಂಗಾರ ರಾಜ್ಯದ ಬೊಕ್ಕಸ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ ” ಎಂದಾಗ , ನಾವೆಲ್ಲರೂ ಹೊಯ್ಸಳೇಶ್ವರನ ಮಕ್ಕಳು ಎಂದ ಮೇಲೆ ಇದು ಅವರಿಗೆ ಸೇರಬೇಕು ಎಂದು ಕೇತುಮಲ್ಲ ಹೇಳಿದ ,
“ ಅಣ್ಣಗಳಿರಾ ನಿಮ್ಮಂತಹ ಪ್ರಜೆಗಳನ್ನು ಪಡೆದ ರಾಜ ಅದೆಷ್ಟು ಪುಣ್ಯವಂತನೋ ” ಎಂದಳು ಶಾಂತಲೆ , ಆಗ ಶಾಂತಲೆ ಮುಂಡಾಸು ತೆಗೆದಳು . ಜನರೆಲ್ಲರಿಗೂ ಬಹಳ ಸಂತೋಷವಾಯಿತು , ನಂತರ ಶಾಂತಲೆ ಕೊಪ್ಪರಿಗೆ ಬಂಗಾರವು ದೇವ ಕಾರ್ಯಕ್ಕೆ ವಿನಿಯೋಗವಾಗಬೇಕು ಎಂದು ಹೇಳಿ ಕೇತುಮಲ್ಲ ನಾಯಕರು ನಮಗೆಲ್ಲರಿಗೂ ಹಿರಿಯರು ದ್ವಾರ ಸಮುದ್ರದಲ್ಲಿ ನಿರ್ಮಾಣವಾಗುವ ಅವಳಿ ದೇವಾಲಯಗಳು ಅವರ ಹೆಸರಿನಲ್ಲಿಯೇ ನಿರ್ಮಾಣವಾಗಲಿ ಎಂದು ಹೇಳಿದಳು . ಕಟ್ಟುವ ದೇವಾಲಯಗಳು ಹೊಯ್ಸಳೇಶ್ವರ ಶಾಂತಲೇಶ್ವರ ಎಂಬ ಹೆಸರಿನಲ್ಲಿರಲಿ ಎಂದು ಒಕ್ಕೊರಲಿನಿಂದ ಜನರೆಲ್ಲರೂ ಕೂಗಿದರು .
ಈ ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ ,
1 , “ತಲಕಾಡುಗೊಂಡನ ಜಯವಾಗಲಿ”
ಆಯ್ಕೆ : ಈ ವಾಕ್ಯವನ್ನು ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದ ‘ ಪ್ರಜಾನಿಷ್ಠೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಹೊಯ್ಸಳರ ರಾಜನಾದ ವಿಷ್ಣುವರ್ಧನನು ಚೋಳರ ದಂಡನಾಯಕನಾದ ಆದಿಯಮನನ್ನು ಯುದ್ಧದಲ್ಲಿ ಸೋಲಿಸಿ ತಲಕಾಡನ್ನು ತನ್ನ ಕೈ ವಶಮಾಡಿಕೊಳ್ಳುತ್ತಾನೆ . ಆ ಸಂದರ್ಭದಲ್ಲಿ ಗೆದ್ದ ರಾಜನಿಗೆ ತನ್ನ ಸೈನಿಕರು ಈ ಮೇಲಿನಂತೆ ಜೈಕಾರ ಸಹ ಈ ಹಾಕಿದರು .
ಸ್ವಾರಸ್ಯ : ಹೊಯ್ಸಳರ ರಾಜನಾದ ವಿಷ್ಣುವರ್ಧನ ಮೇಲೆ ಸೈನಿಕರು ಇಟ್ಟ ಗೌರವ , ಪ್ರೀತಿ , ಅಭಿಮಾನಗಳು , ಯುದ್ಧ ಗೆದ್ದಾಗ ಆಗುವ ಹರ್ಷವನ್ನು ವ್ಯಕ್ತಿ ಪಡಿಸಿರುವುದು ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ
2. “ ಸೆರೆಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮವಲ್ಲ”
. ಆಯ್ಕೆ : ಈ ವಾಕ್ಯವನ್ನು ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದ ‘ ಪ್ರಜಾನಿಷ್ಠೆ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಚೋಳರು ಮತ್ತು ಹೊಯ್ಸಳರ ನಡುವೆ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆಯಿತು . ಈ ಯುದ್ಧದಲ್ಲಿ ಆದಿಯಮನು ಮಡಿದು , ತಲಕಾಡು ವಿಷ್ಣುವರ್ಧನನ ಕೈ ವಶವಾಯಿತು .
ಅನೇಕರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ವಿಷ್ಣುವರ್ಧನನು ಅದಕ್ಕೆ ಅವಕಾಶ ಕೊಡಲಿಲ್ಲ . ಆ ಸಂದರ್ಭದಲ್ಲಿ ವಿಷ್ಣುವರ್ಧನನು ಈ ಮಾತನ್ನು ಹೇಳಿದನು
ಸ್ವಾರಸ್ಯ : ಸಾಮಾನ್ಯವಾಗಿ ಗೆದ್ದ ರಾಜ್ಯವನ್ನು ಲೂಟಿ ಮಾಡುವುದು , ಸೆರೆ ಸಿಕ್ಕ ಸೈನಿಕರನ್ನು ಹಿಂಸೆ ಕೊಡುವುದನ್ನು ಕಾಣುತ್ತೇವೆ . ಆದರೆ ಇಲ್ಲಿ ಸೋತ ರಾಜ್ಯದ ಮೇಲೆ ವಿಷ್ಣುವರ್ಧನನಿಗೆ ಇರುವ ಭಾವನೆಯು ಸ್ವಾರಸ್ಯಕರವಾಗಿದೆ .
3 , “ ತಂಬುಲ ಆಗದ ಮ್ಯಾಲೆ ಮತ್ತೆ ಎತ್ತಿ ಬಾಯಿಗಾಕೊಳೋ ಕೆಟ್ಟತನ ಬ್ಯಾಡಾ “
ಆಯ್ಕೆ : ಈ ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದ ‘ ಪ್ರಜಾನಿಷ್ಠೆ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈರಣ್ಣನು ಬೀರಣ್ಣನಿಂದ ಕೊಡು ಕೊಂಡ ಹೊಲದಲ್ಲಿ ಉಳುಮೆ ಮಾಡುತ್ತಿರುವಾಗ ಒಂದು ಕೊಪ್ಪರಿಗೆ ಬಂಗಾರ ಸಿಗುತ್ತದೆ .
ಇದಕ್ಕೆ ಪೂಜೆ ಮಾಡಿ ಈರಣ್ಣನು ಬೀರಣ್ಣನಿಗೆ “ ಇದು ನಿನ್ನ ಹೊಲದಲ್ಲಿ ಸಿಕ್ಕಿದೆ ತೆಗೆದು ಕೊ ‘ ಎಂದು ಕೊಡಲು ಬಂದ ಸಂದರ್ಭದಲ್ಲಿ ಬೀರಣ್ಣನು ಈ ಮಾತನ್ನು ಹೇಳುತ್ತಾನೆ ,
ಸ್ವಾರಸ್ಯ : ಬನದಮ್ಮನಹಳ್ಳಿಯ ರೈತರಾದ ಬೀರಣ್ಣ , ಇದಣ್ಣನ ಪ್ರಮಾಣಿಕತೆಯು ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ .
ಉ ) ಬಿಟ್ಟ ಸ್ಥಳದಲ್ಲಿ ಸೂಕ್ತಪದವನ್ನು ತುಂಬಿರಿ ,
1 ದ್ವಾರಸಮುದ್ರದ ಸೇನ……………..ಕಡೆಗೆ ಚೈತ್ರಯಾತ್ರೆ ಹೊರಟಿತು .
2. ಮಾನವ ತನ್ನ…………… ರ್ಗುಣಗಳನ್ನು ಗಾಳಿಯಲ್ಲಿ ತೂರಿಬಿಡಬಾರದು .
3 , ನಿಮ್ಮ ಊರಿನ ಹಣ ನಮ್ಮೂರಿನ …………………ಯೇ ವಿನಿಯೋಗವಾಗಲಿ ,
4 , ಬನದಮ್ಮನ ಹಳ್ಳಿಯ ಜನರಿಗೆ …………..ಒಂದೇ ಮೆಟ್ಟಿಲಲ್ಲಿ ಉಳಿಯಿತು .
ಸರಿ ಉತ್ತರಗಳು .
1 ತಲಕಾಡಿನ
2 ಮಾನವೀಯ
3 ಏಳಿಗೆಗಾಗಿ
4 ಸ್ವರ್ಗ
ಭಾಷಾ ಚಟುವಟಿಕೆ
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .
1 , ಅನುನಾಸಿಕ ಸಂಧಿ ಎಂದರೇನು ? ಉದಾಹರಣೆ ಕೊಡಿ.
ಉತ್ತರ : ಕ.ಚ,ಟ ಕಾರಗಳಿಗೆ ಯಾವುದೇ ಅನುನಾಸಿಕವು ಪರವಾದರೂ ಕ ,ಕೈ , ಚ ಕೈ ಟ ಕೈ ಣ , ತ ಕೈ ನ ಪ ಕ್ಕೆ ಮ ಅನುನಾಸಿಕವು ಆದೇಶವಾಗಿ ಬಂದರೆ ಅನುಷಾಸಿಕ ಎನ್ನುವರು .
ಉದಾ:
ಚಿತ್ + ಮೂರ್ತಿ =ಚಿನ್ಮೂರ್ತಿ
ಷಟ್ + ಮುಖ =ಷಣ್ಮುಖ
ಸತ್ + ಮಾನ =ಸನ್ಮಾನ
ಚಿತ್ + ಮಯ =ಚಿನ್ಮಯ
2 , ಕ್ರಿಯಾಸಮಾಸ ಎಂದರೇನು ? ಉದಾಹರಣೆ ಕೊಡಿ,
ಉತ್ತರ : ಪೂರ್ವಪದವು ದ್ವಿತೀಯ ವಿಭಂಶವಾಗಿದ್ದು ಉತ್ತರಪದದಲ್ಲಿರುವ ಕ್ರಿಯೆಯೊಡನೆ ಸೇರಿ ಆದ ಸಮಾಸವೆ . ಕ್ರಿಯಾಸಮಾಸ ,
ಉದಾ : ಮನೆಯನ್ನು + ಕಟ್ಟಿದನು = ಮನೆಕಟ್ಟಿದನು . ..
ಮೈದಡವಿ . ಬಟ್ಟೆಯನ್ನು ಮೈಯನ್ನು ಮರೆತು ಮೈಮರೆತು .
ಕೈಯಂ + ಪಿಡಿದು = ಕೈವಿಡಿದು
ತಲೆಯನ್ನು + ಇಟ್ಟು = ತಲೆಯಿಟ್ಟು
ಮೈಯನ್ನು + ತಡವಿ = ಮೈದಡವಿ
ಕಣ್ಣನ್ನು + ತೆರೆ = ಕಣ್ಣರೆ
ಬಟ್ಟೆಯನ್ನು + ತೋರು = ಬಟ್ಟೆದೋರು .
ಆ ) ಕೊಟ್ಟಿರುವ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದವನ್ನು ಬರೆಯಿರಿ
1,ಯ್,ರ್,ಲ್,ವ್, ಅವರ್ಗೀಯ ವ್ಯಂಜನಗಳು :ಙ್, ಞ್, ಣ್, ನ್, ಮ್ : ……….
2 , ಷಡಂಗ : ಜಶ್ವಸಂದಿ: ಷಣ್ಮಾಸ :………
3. ಈ ಹೊನ್ನು : ಗಮಕ ಸಮಾಸ : ಸ್ಥಾಪನೆ ಮಾಡು:…………
4. ವಾಗ್ದೇವಿ :ಜಶ್ವಸಂದಿ :: ಜಗಜ್ಯೋತಿ:……….
ಸರಿ ಉತ್ತರಗಳು,
೧, ಅನುನಾಸಿಕಾಕ್ಷರಗಳು . 2 ,ಅನುನಾಸಿಕ ಸಂಧಿ 3,ಕಿಯಾ ಸಮಾಸ 4. ಶ್ಚುತ್ವ ಸಂಧಿ
ಈ ) ಕೊಟ್ಟಿರುವ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ ,
1. ” ಹಿತ್ತಲ ಗಿಡ ಮದ್ದಲ್ಲ “
ವೇದ ಸುಳ್ಳಾದರೂ ಗಾದೆ ಸುಳ್ಳಾಗದು , ಗಾದೆಗಳು ವೇದಗಳಿಗೆ ಸಮ . ಇವು ನಮ್ಮ ಹಿರಿಯರ ಅನುಭವದ ಮಾತುಗಳು , ಗಾದೆಗಳು ನೋಡಲು ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ , ಆಂತಹ ಗಾದೆಗಳಲ್ಲಿ ಈ ಗಾದೆ ಮಾತು ಸಹ ಒಂದು.
ತಮ್ಮ ತಮ್ಮ ಮನೆಯ ಅಂಗಳದಲ್ಲಿ ಬೆಳೆದ ಗಿಡ ಮರಗಳಿಗೆ ನಾವು ಹೆಚ್ಚು ಪ್ರಾಮುಖ್ಯತೆ ಕೊಡುವುದಿಲ್ಲ .
ತಮ್ಮ ಬಳಿ ಇರುವ ವಸ್ತುಗಳಿಗೆ , ಮನುಷ್ಯರಿಗೆ ನಮ್ಮ ಮನಸ್ಸಿನಲ್ಲಿ ಗೌರವ , ಬೆಲೆ ಇರುವುದಿಲ್ಲ , ಹಳೆಯ ಕಾಲದಲ್ಲಿ ಎಲ್ಲಾ ರೋಗಗಳಿಗೆ ಗಿಡಮೂಲಿಕೆಗಳಿಂದ ಔಷಧಿ ತಯಾರಿಸಿ ರೋಗವನ್ನು ಗುಣ ಪಡಿಸುತ್ತಿದ್ದರು .
ನಮ್ಮ ಮನೆಯ ಹಿತ್ತಲಲ್ಲಿ ಬೆಳೆದ ಗಿಡಗಳಿಂದ ಮಾಡಿದ ಮದ್ದನ್ನು ಕುಲ್ಲಕವಾಗಿ ಕಾಣುವ ಮನೋಭಾವನೆ ಇತ್ತು ,
ಅದೇ ಬೇರೆಯವರ ತೋಟದ ಗಿಡದಿಂದ ತಯಾರಿಸಿದ ಔಷಧಿಗೆ ಬೆಲೆ ಹೆಚ್ಚು ಕೊಡುತ್ತಿದ್ದರು.ಆದರಿಂದ ಈ ಗಾದೆ ಹುಟ್ಟಿದೆ . ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಮನೆಯಲ್ಲಿ ಇರುವ ವಸ್ತಗಳಿಗೆ ನಾವು ಬೆಲೆಕೊಡದೆ ಅಕ್ಕಪಕ್ಕದ ಮನೆಗಳ ವಸ್ತುಗಳನ್ನು ನೋಡಿ ದುಭಾರಿ ವಸ್ತುಗಳು ,ಬೆಲೆ ಬಾಳುವ ವಸ್ತುಗಳು ಅವರ ಬಳಿ ಇವೆ .
ನಮ್ಮಲ್ಲಿ ಈ ರೀತಿ ವಸ್ತುಗಳು ಎಲ್ಲಾ ಎಂದು ಕೊರಗುತ್ತೇವೆ , ಒಮ್ಮೊಮ್ಮೆ ಖಿನ್ನತೆಗೂ ನಮ್ಮ ಬಳಿ ಏನಿರುತ್ತದೆ ಅದು ಯಾವಾಗಲೂ ಬೆಲೆ ಕಡಿಮೆ ನಮ್ಮ ಕೈಗೆ ಯಾವುದು ಎಟಕುವುದಿಲ್ಲವೋ ಅದರ ಬೆಲೆ ಜಾಸ್ತಿ ಅನ್ನಿಸುತ್ತದೆ ,
ಸುಲಭವಾಗಿ ಸಿಗುತ್ತದೆ ‘ ಎಂದ ಮಾತ್ರಕ್ಕೆ ಆ ವಸ್ತುವಿಗೆ ಬೆಲೆ ಇಲ್ಲ ಎಂದು ಭಾವಿಸಬಾರದು . ನಮ್ಮ ಜೊತೆಗೆ ಇರುವ ವಸ್ತು , ವ್ಯಕ್ತಿಗಳನ್ನು ಅರ್ಥಮಾಡಿಕೊಂಡು ಜೀವನ ನಡೆಸಬೇಕು .
2. ” ದೂರದ ಬೆಟ್ಟ ನುಣ್ಣಗೆ “
ವೇದ ಸುಳ್ಳಾದರೂ ಗಾದೆ ಸುಳ್ಳಾಗದು . ಗಾದೆಗಳು ವೇದಗಳಿಗೆ ಸಮ . ಇವು ನಮ್ಮ ಹಿರಿಯರ ಅನುಭವದ ಮಾತುಗಳು . ಗಾದೆಗಳು ನೋಡಲು ವಾಮನನಾದರೂ ಆರ್ಥದಲ್ಲಿ ತ್ರಿವಿಕ್ರಮನಂತೆ , ಅಂತಹ ಗಾದೆಗಳಲ್ಲಿ ಈ ಗಾದೆ ಮಾತು ಸಹ ಒಂದು . ದೂರದಲ್ಲಿರುವ ಬೆಟ್ಟ ನೋಡುವುದಕ್ಕೆ ಚಿಕ್ಕದಾಗಿ ಕಾಣಿಸುತ್ತದೆ .
ದೂರದಿಂದ ಅದನ್ನು ಸುಲಭವಾಗಿ ಹತ್ತಬಹುದು ಎಂದು ಅನ್ನಿಸುತ್ತದೆ . ಆದರೆ ಬೆಟ್ಟದ ನಿಜ ಸ್ವರೂಪ ತಿಳಿಯಬೇಕಾದರೆ ಹತ್ತಿರ ಹೋಗಿ ನೋಡಬೇಕು . ಆಗ ಬೆಟ್ಟದ ಮೇಲಿರುವ ಕಲ್ಲು ಮುಳ್ಳು , ಅದರ ಎತ್ತರ ಎಷ್ಟು ಎಂದು ತಿಳಿಯುತ್ತದೆ .
ಹತ್ತಿರ ಹೋಗಿ ನೋಡಿದಾಗ , ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನು ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವು ನಮಗೆ ಆಗುತ್ತದೆ .ಹಾಗೆಯೇ ಸಂಬಂಧಗಳು ಸಹ ದೂರದಿಂದ ನೋಡಿದಾಗ ಎಲ್ಲಾರೂ ನಮ್ಮವರೇ ಎಂದು ಗೊತ್ತಾಗುತ್ತದೆ .
‘ದೂರವಿದ್ದರೆ ಪರಿಮಳ , ಹತ್ತಿರ ಬಂದರೆ ವಾಸನೆ ‘ ಎಂಬ ಮಾತಿನಂತೆ ಮನುಷ್ಯನ ನಿಜವಾದ ಬಣ್ಣ ತಿಳಿಯಲು ಅವನ ಜೊತೆಗೆ ಇದ್ದು ನೋಡಬೇಕು . ಪ್ರಪಂಚದಲ್ಲಿ ಎಲ್ಲಾರಿಗೂ ಕಷ್ಟ ಬರುತ್ತದೆ ಎಂಬ ಅಂಶವನ್ನು ನಾವು ಮರೆಯಬಾರದು .
ದೇವರು ನನಗೆ ಮಾತ್ರ ಕಷ್ಟ ಕೊಟ್ಟಿದ್ದಾನೆ . ಬೇರೆಯವರು ನಗುನಗುತ್ತಾ ಜೀವನ ಸಾಗಿಸುತ್ತಿದ್ದಾರೆ . ಎಂದು ಕೊಂಡು ಕೊರಗಬಾರದು . ಅವರ ಜೀವನದಲ್ಲಿ ಎಷ್ಟು ಕಷ್ಟಗಳಿವೆ ಎಂದು ಅವರ ಹತ್ತಿರ ಹೋದಾಗ ತಿಳಿಯುತ್ತದೆ .
ಎಲ್ಲಾರ ಮನೆಯ ದೋಸೆನೂ ತೂತೆ ಎಂಬ ಸತ್ಯ ತಿಳಿದು ಬದುಕಬೇಕಾಗಿದೆ.